HEALTH TIPS

No title

                    ದೇವರ ಸೇವೆಯಿಂದ ಮನುಷ್ಯ ಜನ್ಮ ಸಾರ್ಥಕ
      ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ವಾಷರ್ಿಕೋತ್ಸವದ ಅಂಗವಾಗಿ ವಿಶೇಷ ಸಭಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
           ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ  ಶ್ರೀನಿವಾಸ ಆಳ್ವ ಕಳತ್ತೂರು ಅಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ ಕೆ.ಎನ್.ಕೃಷ್ಣ ಭಟ್, ಅವಿನಾಶ್ ರೈ ಬದಿಯಡ್ಕ, ಜಯಂತಿ ಕುಂಟಿಕಾನ ಶುಭಹಾರೈಸಿದರು. ಹಿರಿಯರಾದ ವೇದಮೂತರ್ಿ ಪಾಂಡೇಲು ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು. ಪ್ರಧಾನ ಭಾಷಣ ಮಾಡಿದ ನರಹರಿ ಮಾಸ್ಟರ್ ಕಳತ್ತೂರು ಮನುಷ್ಯ ಜೀವನ ಅತ್ಯಂತ ಶ್ರೇಷ್ಠ. ಯಾವತ್ತೂ ಶಾಶ್ವತವಲ್ಲದ ಈ ಜೀವನದಲ್ಲಿ ಒಂದಷ್ಟು ದೇವರ ಸೇವೆ ಹಾಗೂ ಸಮಾಜಸೇವೆ ಮಾಡಿದರೆ ಜೀವನ ಸಾರ್ಥಕವಾಗುವುದು ಎಂದರು. ಐದು ಬೆರಳುಗಳನ್ನು ಸೇರಿಸಿದರೆ ಮಾತ್ರ ಒಂದು ಕೈಯಿಂದ ಹೇಗೆ ಉತ್ತಮ ಕೆಲಸ ಮಾಡಲು ಸಾಧ್ಯವೋ ಹಾಗೆಯೇ ಎಲ್ಲರೂ ಒಂದಾಗಿ ದುಡಿದರೆ ಜೀಣರ್ೋದ್ಧಾರ ಕಾರ್ಯ ಸುಲಭವಾಗಿ ನಡೆಸಬಹುದು ಎಂದು ಅಭಿಪ್ರಾಯಪಟ್ಟರು.
    ಜೀಣರ್ೋದ್ಧಾರಗೊಳ್ಳುತ್ತಿರುವ ಕುಂಟಿಕಾನ ಕ್ಷೇತ್ರದ ರಸ್ತೆಗೆ ಕಾಂಕ್ರೀಟ್-ಡಾಮರು ಹಾಕಿಸಿ ಸಂಚಾರ ಯೋಗ್ಯಗೊಳಿಸಿದ ಬ್ಲಾಕ್ ಪಂಚಾಯತು ಸದಸ್ಯ ಅವಿನಾಶ್ ರೈ, ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಸದಸ್ಯೆ ಜಯಂತಿ ಹಾಗೂ ಪಂಚಾಯತ್ ಆಡಳಿತ ಸಮಿತಿಗೆ ವಿಶೇಷ ಅಭಿನಂದನೆಗಳನ್ನು ಕ್ಷೇತ್ರದ ವತಿಯಿಂದ ಸಲ್ಲಿಸಲಾಯಿತು.
ರಾಜಾರಾಮ ಮಧ್ಯಸ್ಥ ಕುಂಜಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದಶರ್ಿ ಕೆ.ಎಂ.ಶ್ಯಾಮ್ ಭಟ್ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries