HEALTH TIPS

No title

               ಸಂಗೀತ ವಿದುಷಿ ಶಕುಂತಳಾ ಕೃಷ್ಣ ಭಟ್ ಕುಂಚಿನಡ್ಕ ಅವರಿಗೆ `ಸಂಗೀತ ರತ್ನ' ಬಿರುದು ಪ್ರದಾನ
     ಮುಳ್ಳೇರಿಯ: ಸಂಗೀತ ವಿದುಷಿ ಶಕುಂತಳಾ ಕೃಷ್ಣ ಭಟ್ ಕುಂಚಿನಡ್ಕ ಅವರನ್ನು ಕುಂಟಾರು ಶ್ರೀ ಮಹಾವಿಷ್ಣು ದೇವಸ್ಥಾನದ ವಾಷರ್ಿಕ ಮಹೋತ್ಸವದ ಸಂದರ್ಭದಲ್ಲಿ `ಸಂಗೀತ ರತ್ನ' ಬಿರುದು ನೀಡಿ ಬ್ರಹ್ಮಶ್ರೀ ವೇದಮೂತರ್ಿ ಕುಂಟಾರು ವಾಸುದೇವ ತಂತ್ರಿಗಳು ಸಮ್ಮಾನಿಸಿದರು.
   ಸಮಾರಂಭದಲ್ಲಿ ಶ್ರೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ ರಾಜೇಂದ್ರ ಕೆ.ಕುಂಟಾರು, ಕೆ.ಯು.ಕೃಷ್ಣ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ದಯಾನಂದಜೀ ಕತ್ತರ್ಸಾರ್ ಧಾಮರ್ಿಕ ಭಾಷಣಗೈದರು.
   ಇದೇ ಸಂದರ್ಭದಲ್ಲಿ ಊರಿನ ಹಿರಿಯರಾದ ದೇವಕ್ಕ ಹುಣ್ಸೆಡ್ಕ(ಐದನೇ ತಲೆಮಾರಿನ ಮಹಿಳೆ) ಮತ್ತು ಲಕ್ಷ್ಮೀ(ಶತಾಯುಷಿ) ಅವರನ್ನು ಗೌರವಿಸಲಾಯಿತು. ಕಳೆದ ವರ್ಷದ 10 ನೇ 7 ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾಥರ್ಿನಿಯರನ್ನು ಅಭಿನಂದಿಸಲಾಯಿತು.
  ಸಭಾ ಕಾರ್ಯಕ್ರಮದ ಬಳಿಕ ಶಕುಂತಳಾ ಕೃಷ್ಣ ಭಟ್ ಕುಂಚಿನಡ್ಕ ಅವರಿಂದ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯದಲ್ಲಿ ವೇಣುಗೋಪಾಲ್ ಶ್ಯಾನ್ಭೋಗ್(ವಯಲಿನ್), ಡಾ.ಶಂಕರ್ರಾಜ್(ಮೃದಂಗ) ಮತ್ತು ಮಾಸ್ಟರ್ ಶ್ರೀವತ್ಸ ಕುಂಚಿನಡ್ಕ (ಘಟಂ) ಸಹಕರಿಸಿದರು.
       

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries