HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕುಂಟಾರಿನಲ್ಲಿ ರಂಜಿಸಿದ ಸಂಗೀತ ಕಾರ್ಯಕ್ರಮ
    ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ಕ್ಷೇತ್ರ ಪರಿಸರದಲ್ಲಿ ಕು.ವಿಜಯಶ್ರೀ ವಿಠ್ಠಲ್ ಚೆನ್ನೈ ಹಾಗೂ ಕು.ಕೃತಿ ಭಟ್ ಯುಎಸ್ಎ ಇವರಿಂದ ಸೋಮವಾರ ನಡೆದ ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರ ಮನಸೂರೆಗೊಂಡಿತು.
   ಖ್ಯಾತ ವಯಲಿನ್ ವಾದಕ ಕಲೈಮಾಮಣಿ ವಿಠಲ ರಾಮಮೂತರ್ಿ ಚೆನ್ನೈ ಅವರ ಪುತ್ರಿಯಾಗಿರುವ ಕು.ವಿಜಯಶ್ರೀ ಮತ್ತು ಕೃತಿ ಭಟ್  ಎರಡು ಗಂಟೆಗಳ ಕನರ್ಾಟಕ ಶಾಸ್ತ್ರೀಯ ಸಂಗೀತ ಗಾಯನವು ಅವರ ಕಂಠಸಿರಿಯ ಪ್ರಬುದ್ಧತೆಗೆ ಸಾಕ್ಷಿಯಾಗಿತ್ತು. ಇವರಿಬ್ಬರೂ ಇದೇ ಮೊದಲ ಬಾರಿಗೆ ಜೊತೆಯಾಗಿ ಹಾಡುತ್ತಿದ್ದರೂ ಸಂಗೀತದ ಹೊನಲನ್ನು ಹರಿಸುವಲ್ಲಿ ಯಶಸ್ವಿಯಾದರು.
   ಇವರಿಗೆ ಪಕ್ಕವಾದ್ಯದಲ್ಲಿ ವಯಲಿನ್ನಲ್ಲಿ ಪಾವನಿ ಅನುಪಿಂಡಿ, ಮೃದಂಗದಲ್ಲಿ ಸುನಾದ ಕೃಷ್ಣ ಸಹಕರಿಸಿದರು. ಈ ಸಂದರ್ಭದಲ್ಲಿ ಖ್ಯಾತ ಸಂಗೀತ ಕಲಾವಿದರಾದ ವಿಠಲ ರಾಮಮೂತರ್ಿ ಚೆನ್ನೈ, ಪುರುಷೋತ್ತಮ ಪುಣಿಂಚಿತ್ತಾಯ, ಬಾಬು ರೈ, ಗಣರಾಜ ಕಾಲರ್ೆ, ಗಂಗಾ ಪಾದೇಕಲ್, ಪ್ರಭಾಕರ ಕುಂಜಾರು, ಬಾಲರಾಜ್ ಬೆದ್ರಡಿ, ಕಾಶೀನಾಥ್, ಚಂದ್ರಿಕೆ ಚೆನ್ನೈ, ಕೋಳಿಕ್ಕಜೆ ಬಾಲಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.
 ಈ ಸಂದರ್ಭದಲ್ಲಿ ಖ್ಯಾತ ವಯಲಿನ್ ವಾದಕ ಕಲೈಮಾಮಣಿ ವಿಠಲ ರಾಮಮೂತರ್ಿ ಚೆನ್ನೆ, ಅವರ ಪತ್ನಿ ಚಂದ್ರಿಕೆ, ಮೃದಂಗದಲ್ಲಿ ಸಹಕರಿಸಿದ ಸುನಾದ ಕೃಷ್ಣ  ಅವರನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಗಾಯಕಿಯರಾದ ಕು.ವಿಜಯಶ್ರೀ ಮತ್ತು ಕೃತಿ ಭಟ್, ಪಕ್ಕ ವಾದ್ಯದಲ್ಲಿ ವಯಲಿನ್ನಲ್ಲಿ ಸಹಕರಿಸಿದ ಪಾವನಿ ಅನುಪಿಂಡಿ ಅವರನ್ನು ಸುಜಾತ ತಂತ್ರಿ ಗೌರವಿಸಿದರು.
 ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಸ್ವಾಗತಿಸಿ, ವಂದಿಸಿದರು.
    ಮೇ 31ರಂದು ಸಂಜೆ ಅಗಲ್ಪಾಡಿ ಕ್ಷೇತ್ರದಲ್ಲಿ ಇವರ ಸಂಗೀತ ಸೇವಾ ಕಾರ್ಯಕ್ರಮ ನಡೆಯಲಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries