HEALTH TIPS

No title

              ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ದರ, ಅಬಕಾರಿ ಸುಂಕ ಇಳಿಕೆ ಮಾಡಿದ ಕೇರಳ ಸಕರ್ಾರ
    ತಿರುವನಂತಪುರಂ: ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಏರಿಕೆಯಾಗುತ್ತಲೇ ಇರುವಂತೆ ಆಯಾ ರಾಜ್ಯ ಸಕರ್ಾರಗಳು ತಮ್ಮ ಪಾಲಿನ ಅಬಕಾರಿ ಸುಂಕ ಇಳಿಕೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿರುವ ಹೊತ್ತಲ್ಲೇ ಕೇರಳ ಸಕರ್ಾರ ತನ್ನ ಪಾಲಿನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿದೆ.
    ಕೇರಳ ಸಕರ್ಾರ ತೈಲ ದರವನ್ನು ರೂ.1  ಇಳಿಸುವ ಮಹತ್ವದ ನಿಧರ್ಾರ ತೆಗೆದುಕೊಂಡಿದ್ದು, ಇದರಿಂದ ಕೇರಳದಲ್ಲಿ ತೈಲ ದರ ಒಂದು ರೂ. ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. ಅಬಕಾರಿ ಸುಂಕ ಇಳಿಕೆ ಮಾಡುವ ಮಹತ್ವದ ನಿಧರ್ಾರ ಕೈಗೊಳ್ಳುವ ಮೂಲಕ ಈ ನಿಧರ್ಾರ ಕೈಗೊಂಡ ಮೊದಲ ರಾಜ್ಯ ಎಂಬ ಕೀತರ್ಿಗೂ ಕೇರಳ ಭಾಜನವಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಈ ನಿಧರ್ಾರ ಜೂನ್. 1ರಿಂದ ಜಾರಿಗೆ ಬರಲಿದೆ.
     'ತೈಲ ದರದ ಇಳಿಕೆಯಿಂದ ರಾಜ್ಯಕ್ಕೆ ರೂ.509 ಕೋಟಿ ನಷ್ಟವಾಗುತ್ತಿತ್ತು. ಅಲ್ಲದೇ ಇಡೀ ದೇಶ ತೈಲದ ದರವನ್ನು ಇಳಿಸುವಂತೆ  ಒತ್ತಾಯ ಹೇರಿತ್ತು. ಆದರೆ ಕೇಂದ್ರ ಸಕರ್ಾರ ಮಾತ್ರ ಕಿವಿಗೊಡಲಿಲ್ಲ. ಹಾಗಾಗಿ ಈ ನಿಧರ್ಾರದ ಮುಖೇನ ಕೇಂದ್ರ ಸಕರ್ಾರಕ್ಕೆ ನಾವು ಸಂದೇಶ ರವಾನಿಸಿದ್ದೇವೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿದ್ದಾರೆ.
ಎರಡು ವಾರಗಳ ಹಿಂದೆ ಪೆಟ್ರೋಲ್ ಪ್ರತಿ ಲೀಟರ್ ದರ 3.8 ಹಾಗೂ ಡೀಸೆಲ್ ದರ 3.38ರಷ್ಟು ಏರಿಕೆಯಾಗಿತ್ತು. ಇದು ಈ ವರೆಗಿನ ಗರಿಷ್ಛ ದರ ಏರಿಕೆಯಾಗಿತ್ತು.
   ಬುಧವಾರ ಪೆಟ್ರೋಲ್ ಮತ್ತು ಡಿಸೇಲ್ ದರ 1 ಪೈಸೆಯಷ್ಟು ಇಳಿಕೆಯಾಗಿದ್ದು,  ಈ ನಿರ್ಣಯದ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ತಾಂತ್ರಿಕ ದೋಷದಿಂದ ದರ ಇಳಿಕೆ 60 ಪೈಸೆ ಎಂದು ಪ್ರಕಟಗೊಂಡಿರುವುದಾಗಿ ಐಒಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries