ಹೊಸಂಗಡಿಯಲ್ಲಿ ವಿದ್ಯುತ್ ಮೊಟಕು : ಬಿಜೆಪಿಯಿಂದ ಪ್ರತಿಭಟನೆ ಎಚ್ಚರಿಕೆ
ಮಂಜೇಶ್ವರ: ಮಂಜೇಶ್ವರ, ಹೊಸಂಗಡಿ, ಕುಂಜತ್ತೂರು ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಮೊಟಕಿನಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಪರಿಹರಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಮಂಜೇಶ್ವರ ಪಂಚಾಯತು ಸಮಿತಿಯು ಎಚ್ಚರಿಸಿದೆ.
ರಂಜಾನ್ ವ್ರತಾಚರಣೆ, ಶಾಲಾ ಕಾಲೇಜುಗಳ ಆರಂಭ, ಮಳೆಗಾಲ ಆರಂಭ ಮುಂತಾದ ಸಂದರ್ಭಗಳು ಇದೀಗ ಹೆಚ್ಚಿದ ವಿದ್ಯುತ್ ಬಳಕೆಯ ಮಧ್ಯೆ ಆಗಾಗ ವಿದ್ಯುತ್ ಮೊಟಕಾಗುತ್ತಿರುವುದರಿಂದ ಜನರಿಗೆ ಭಾರೀ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ವಿದ್ಯುತ್ ಕಚೇರಿಗೆ ಕರೆ ಮಾಡಿ ಪ್ರಶ್ನಿಸಿದರೆ ಹಾರಿಕೆಯ ಉತ್ತರ ಲಭಿಸುತ್ತಿರುವುದಾಗಿ ಬಿಜೆಪಿ ದೂರಿದೆ.
ಮಂಜೇಶ್ವರ ವಿದ್ಯುತ್ ಇಲಾಖೆಯಲ್ಲಿ ಅಗತ್ಯದಷ್ಟು ನೌಕರರ ನೇಮಕ ಮಾಡದಿರುವುದು ಈ ಸಂಕಷ್ಟಗಳಿಗೆ ಮೂಲ ಕಾರಣವಾಗಿದ್ದು, ಈ ಮೂಲಕ ಕೇರಳ ಸರಕಾರದ ಆಡಳಿತ ವೈಫಲ್ಯದಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಬಿಜೆಪಿ ಪಂಚಾಯತ್ ಸಮಿತಿಯು ಹೇಳಿದೆ.
ಮಂಜೇಶ್ವರ: ಮಂಜೇಶ್ವರ, ಹೊಸಂಗಡಿ, ಕುಂಜತ್ತೂರು ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಮೊಟಕಿನಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಪರಿಹರಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಮಂಜೇಶ್ವರ ಪಂಚಾಯತು ಸಮಿತಿಯು ಎಚ್ಚರಿಸಿದೆ.
ರಂಜಾನ್ ವ್ರತಾಚರಣೆ, ಶಾಲಾ ಕಾಲೇಜುಗಳ ಆರಂಭ, ಮಳೆಗಾಲ ಆರಂಭ ಮುಂತಾದ ಸಂದರ್ಭಗಳು ಇದೀಗ ಹೆಚ್ಚಿದ ವಿದ್ಯುತ್ ಬಳಕೆಯ ಮಧ್ಯೆ ಆಗಾಗ ವಿದ್ಯುತ್ ಮೊಟಕಾಗುತ್ತಿರುವುದರಿಂದ ಜನರಿಗೆ ಭಾರೀ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ವಿದ್ಯುತ್ ಕಚೇರಿಗೆ ಕರೆ ಮಾಡಿ ಪ್ರಶ್ನಿಸಿದರೆ ಹಾರಿಕೆಯ ಉತ್ತರ ಲಭಿಸುತ್ತಿರುವುದಾಗಿ ಬಿಜೆಪಿ ದೂರಿದೆ.
ಮಂಜೇಶ್ವರ ವಿದ್ಯುತ್ ಇಲಾಖೆಯಲ್ಲಿ ಅಗತ್ಯದಷ್ಟು ನೌಕರರ ನೇಮಕ ಮಾಡದಿರುವುದು ಈ ಸಂಕಷ್ಟಗಳಿಗೆ ಮೂಲ ಕಾರಣವಾಗಿದ್ದು, ಈ ಮೂಲಕ ಕೇರಳ ಸರಕಾರದ ಆಡಳಿತ ವೈಫಲ್ಯದಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಬಿಜೆಪಿ ಪಂಚಾಯತ್ ಸಮಿತಿಯು ಹೇಳಿದೆ.