HEALTH TIPS

No title

            ಶ್ರೀಧಾಮ ಕೊಠಡಿಯ ಶಿಲಾನ್ಯಾಸ 
    ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರದ ನೈರುತ್ಯ ಭಾಗದಲ್ಲಿ ಮೂಸೋಡಿಯ ಅಧಿಕ ಕಡಪ್ಪುರದ ಸಮದ್ರ ತೀರದಲ್ಲಿರುವ ಅತ್ಯಂತ ಪುರಾತನವೂ, ಕಾರಣೀಕದಿಂದಲೂ ನೆಲೆಗೊಂಡಿರುವ ಶ್ರೀ ಒತ್ತೆಚಾದಿ  ಗುಳಿಗ ಸಾನಿಧ್ಯದ ಸಮೀಪ ನೂತನವಾಗಿ ನಿಮರ್ಾಣಗೊಳ್ಳುತ್ತಿರುವ ಶ್ರೀಧಾಮ ಕೊಠಡಿಯ ಶಿಲಾನ್ಯಾಸ ಮಂಗಳವಾರ ನಡೆಯಿತು.
   ಕನಿಲ ಶ್ರೀ ಭಗವತೀ ಕ್ಷೇತ್ರದ ಹಿರಿಯ ಕಾರ್ನವರಾದ ಮಂಜಪ್ಪ ಕಾರ್ನವರ್ ಅವರ ದಿವ್ಯ ಉಪಸ್ಥಿತಿಯಲ್ಲಿ ಕ್ಷೇತ್ರದ ಮಾಣಿಂಞ ಅವರು ಶಿಲಾನ್ಯಾಸಗೈದರು. ಉದ್ಯಮಿ ಜನಾರ್ಧನ ಪಿ. ಮಲ್ಪೆ ದೀಪ ಪ್ರಜ್ವಲನೆಗೈದು ಸಮಾರಂಭಕ್ಕೆ ಚಾಲನೆ ನೀಡಿದರು.
   ಕಾರ್ಯಕ್ರಮದಲ್ಲಿ ಸಂತೋಷ್, ಪುರುಷೋತ್ತಮ ಗುರಿಕ್ಕಾರ್, ದೇವದಾಸ್ ಸಾಲಿಯಾನ್ ಕಡಪ್ಪರ, ದೇಕುಂಞಿ ಗುರಿಕ್ಕಾರ್, ಬಿ.ಎಂ.ಮಚ್ಛೇಂದ್ರ, ಪದ್ಮನಾಭ ಕಡಪ್ಪರ, ಅಶೋಕ್ ಪಡಿಪ್ಪಿರೆ, ವಿಶ್ವನಾಥ ಕುದುರು, ಟಿ.ಲಕ್ಷ್ಮಣ  ಸಾಲಿಯಾನ್, ಪುಷ್ಪರಾಜ್ ಐಲ್, ಕಣ್ಣಪ್ಪ ಬಾದೆಮಾರ್, ಯಾದವ ಬಿ.ಎಂ, ಮಾದವ ಸಂಗಂ, ಜನಾರ್ಧನ ವಾಮಂಜೂರು, ಕೇಶವ ಭಂಡಾರಮನೆ, ಕುಮಾರ ಬಾದೆಮಾರು, ಜಯಂತ ಕೊಪ್ಪಳ, ದಿವಾಕರ್ ಪೊಯ್ಯೆಕಂಡ, ಶಶಿಕಾಂತ ಐಲ, ಗೋಪಾಲ ಬಂಗೇರ ಉಪ್ಪಳ ಉಪಸ್ಥಿತರಿದ್ದರು.
   ಜಗದೀಶ ವೈದ್ಯರ್ ಅವರ ಮಾರ್ಗದರ್ಶನದಲ್ಲಿ ದೈವದ ವಾಷರ್ಿಕ ಪರ್ವ ಜರಗಿತು. ಶಿಲ್ಪಿ ಕುಂಞಿರಾಮನ್ ನೇತೃತ್ವ ವಹಿಸಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries