HEALTH TIPS

No title

                   ಮುಳ್ಳೇರಿಯದಲ್ಲಿ ಸಂಗೀತ ಶಿಬಿರ ಆರಂಭ
    ಮುಳ್ಳೇರಿಯ: ರಾಗಸುಧಾರಸ ಕಾಸರಗೋಡು ಇದರ ಪ್ರಾಯೋಜಕತ್ವದಲ್ಲಿ, ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಸಹಯೋಗದೊಂದಿಗೆ ನಾಲ್ಕು ದಿನಗಳ ಸಂಗೀತ ಶಿಬಿರ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ಮಂಗಳವಾರ ಆರಂಭಗೊಂಡಿತು.
   ಹಿರಿಯ ಸಂಗೀತ ಶಿಕ್ಷಕಿ ವಸಂತಿ ಕುಂಜತ್ತಾಯ ಮುಳ್ಳೇರಿಯ ಶಿಬಿರವನ್ನು ಉದ್ಘಾಟಿಸಿದರು. ಖ್ಯಾತ ಸಂಗೀತ ವಿದ್ವಾಂಸರಾದ ಕಲೈಮಾಮಣಿ ವಿಠಲ ರಾಮಮೂತರ್ಿ ಚೆನ್ನೈ, ಕಾಶಿನಾಥ್, ರಂಗನಾಥ ಶೆಣೈ, ಕೋಳಿಕ್ಕಜೆ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
  ವಿಠಲ ರಾಮಮೂತರ್ಿ ಶಿಬಿರವನ್ನು ನಡೆಸಿಕೊಡುತ್ತಿದ್ದಾರೆ. ಶಿಬಿರದಲ್ಲಿ ಸಂಗೀತ ಹಾಡುಗಾರಿಕೆ(ವೋಕಲ್) ತರಬೇತಿ ನೀಡಲಾಗುವುದು. ಮಕ್ಕಳ ಸಂಗೀತಾಸಕ್ತಿ, ಸಂಗೀತದ ಹಿರಿಮೆಯನ್ನು ತೋರಿಸಿ ಅರಿಯಲು ಶಿಬಿರ ನೆರವಾಗಲಿದೆ.
   ಜೂನ್ 1ರಂದು ಸಂಜೆ 5ರಿಂದ ಶಿಬಿರಾಥರ್ಿಗಳಿಂದ ಗಾಯನ, ಕನರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ವಿದ್ವಾನ್ ಟಿ.ಎಂ.ಕೃಷ್ಣ ಚೆನ್ನೈ(ಹಾಡುಗಾರಿಕೆ), ವಿಠಲ ರಾಮಮೂತರ್ಿ ಚೆನ್ನೈ(ವಯಲಿನ್), ವಿದ್ವಾನ್ ಅರುಣಪ್ರಕಾಶ್(ಮೃದಂಗ) ಭಾಗವಹಿಸುವರು. ಸಮಾರೋಪ ಸಮಾರಂಭದಲ್ಲಿ ರಾಗಸುಧಾರಸ ಇದರ ಅಧ್ಯಕ್ಷ ಡಾ.ಶಂಕರ್ರಾಜ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಮಧೂರು ಬಾಲಸುಬ್ರಹ್ಮಣ್ಯ ಸರಳಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು
 ಮಕ್ಕಳ ಸಂಗೀತಾಸಕ್ತಿ, ಸಂಗೀತದ ಹಿರಿಮೆಯನ್ನು ಪ್ರತಿಬಿಂಬಿಸುವಲ್ಲಿ ಕಳೆದ ಮೂರು ವರ್ಷಗಳಿಂದ ನಡೆದುಬರುತ್ತಿರುವ ಈ ಶಿಬಿರ ಸಂಗೀತಾಸಕ್ತರನ್ನು ಸೆಳೆಯುತ್ತಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries