HEALTH TIPS

No title

                ವಿದ್ಯಾಥರ್ಿಗಳಿಗೆ ಅಭಿನಂದನೆ
     ಕುಂಬಳೆ: ದೇಶೀಯ ಅಧ್ಯಾಪಕ ಪರಿಷತ್ (ಎನ್ಟಿಯು)ನ ಮಂಜೇಶ್ವರ ಉಪಜಿಲ್ಲಾ  ಸಮಿತಿಯ ವತಿಯಿಂದ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ  ಎಲ್ಲಾ  ವಿಷಯಗಳಲ್ಲಿ  ಎ ಪ್ಲಸ್ ಪಡೆದು ತೇರ್ಗಡೆಯಾದ ವಿದ್ಯಾಥರ್ಿಗಳನ್ನು  ಅಭಿನಂದಿಸಲಾಯಿತು.
   ಧರ್ಮತ್ತಡ್ಕ ಶ್ರೀ ದುಗರ್ಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ  ಜರಗಿದ ಸಮಾರಂಭದ ಅಧ್ಯಕ್ಷತೆಯನ್ನು  ಎನ್ಟಿಯು ಮಂಜೇಶ್ವರ ಉಪಜಿಲ್ಲಾ  ಸಮಿತಿಯ ಅಧ್ಯಕ್ಷ ಅರವಿಂದಾಕ್ಷ ಭಂಡಾರಿ ವಹಿಸಿದ್ದರು. ಧರ್ಮತ್ತಡ್ಕ ಹೈಸ್ಕೂಲಿನ ನಿವೃತ್ತ  ಮುಖ್ಯ ಶಿಕ್ಷಕ ರಾಮಚಂದ್ರ ಉಳುವಾನ ಅತಿಥಿಯಾಗಿ ಪಾಲ್ಗೊಂಡು ಶುಭಹಾರೈಸಿದರು.
  ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್, ಶಾಲಾ ಪ್ರಬಂಧಕ ಎನ್.ಶಂಕರನಾರಾಯಣ ಭಟ್, ಧರ್ಮತ್ತಡ್ಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎನ್.ಮಹಾಲಿಂಗ ಭಟ್, ಎನ್ಟಿಯು ಜಿಲ್ಲಾಧ್ಯಕ್ಷ  ವಿಘ್ನೇಶ್ವರ ಕೆದುಕೋಡಿ, ಸಂಘಟನೆಯ ರಾಜ್ಯ ಸಮಿತಿಯ ಸದಸ್ಯರಾದ ಚಂದ್ರಹಾಸ ಮತ್ತು  ಕೆ.ವೆಂಕಪ್ಪ  ಶೆಟ್ಟಿ  ಕಯ್ಯಾರು ಮುಂತಾದವರು ಉಪಸ್ಥಿತರಿದ್ದರು.
   ಉತ್ತಮ ಅಂಕಗಳನ್ನು  ಗಳಿಸಿದ 14 ಮಂದಿ ವಿದ್ಯಾಥರ್ಿಗಳನ್ನು  ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಅಭಿನಂದನೆ ಸ್ವೀಕರಿಸಿದ ವಿದ್ಯಾಥರ್ಿಗಳು ಮಾತನಾಡಿ, ಕೃತಜ್ಞತೆ ಸಲ್ಲಿಸಿದರು. ಅಧ್ಯಾಪಕ ಸತೀಶ್ಕುಮಾರ್ ಶೆಟ್ಟಿ  ಒಡ್ಡಂಬೆಟ್ಟು  ಸ್ವಾಗತಿಸಿ, ಎನ್ಟಿಯು ಉಪಜಿಲ್ಲಾ  ಸಮಿತಿಯ ಕಾರ್ಯದಶರ್ಿ ಅಜಿತ್ಕುಮಾರ್ ವಂದಿಸಿದರು. ಕೃಷ್ಣ ಪ್ರಸಾದ್ ಕಡೆಗದ್ದೆ  ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries