HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಸಹಾಯಧನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ
     ಮಂಜೇಶ್ವರ: ಬಂಟರ ಸಂಘ ಮೀಂಜ ಪಂಚಾಯತು ಸಮಿತಿಯ ವತಿಯಿಂದ ಜೂ. 23 ರಂದು ಶನಿವಾರ ಅಪರಾಹ್ನ 3. ಕ್ಕೆ ಮೀಯಪದವು ಚೌಟರ ಚಾವಡಿಯಲ್ಲಿ ಮೀಂಜ ಪಂಚಾಯತಿಗೊಳಪಟ್ಟ 5ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ಬಂಟ ಸಮಾಜದ ವಿದ್ಯಾಥರ್ಿಗಳಿಗೆ ಕಲಿಕಾ ಸಹಾಯಧನ ವಿತರಣೆ ಹಾಗೂ 2017-18ನೇ ಸಾಲಿನಲ್ಲಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಒಬ್ಬ ವಿದ್ಯಾಥರ್ಿ ಮತ್ತು ವಿದ್ಯಾಥರ್ಿನಿಗೆ ಪ್ರತಿಭಾ ಪುರಸ್ಕಾರ ಮತ್ತು ಗೌರವ ಹುದ್ದೆಗೆ ಆಯ್ಕೆಗೊಂಡ ಸ್ವಜಾತಿ ಬಾಂಧವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
   ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಸಂಘ ಮಂಜೇಶ್ವರದ ಅಧ್ಯಕ್ಷ ಕೆ. ದಾಸಣ್ಣ ಆಳ್ವ ಕುಳೂರು ಬೀಡು ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಿರುವರು. ಬಂಟರ ಸಂಘ ಮೀಂಜ ಘಟಕದ ಅಧ್ಯಕ್ಷ ಜಗದೀಶ ಶೆಟ್ಟಿ ಎಲಿಯಾಣ ಅಧ್ಯಕ್ಷತೆ ವಹಿಸಲಿರುವರು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸದಾನಂದ ರೈ, ಮುಂಬೈ ಉದ್ಯಮಿಗಳಾದ ರಘುರಾಮ ಶೆಟ್ಟಿ ಕುಳೂರು ಕನ್ಯಾನ, ಮೋಹನ್ ಹೆಗ್ಡೆ ಬೆಜ್ಜ ಮುಖ್ಯ ಅತಿಥಿಗಳಾಗಿರುವುರು. ಈ ವೇಳೆ ಕಾಸರಗೋಡು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್ ಶೆಟ್ಟಿ ಪೊಯ್ಯೆಲ್ ಹಾಗೂ ಕನರ್ಾಟಕ ಸರಕಾರ ಯಕ್ಷಗಾನ ಅಕಾಡೆಮಿ ಸದಸ್ಯ ಎಮ್. ದಾಮೋದರ ಶೆಟ್ಟಿಯವರನ್ನು ಅಭಿನಂದಿಸಲಾಗುವುದು. ಈ ವೇಳೆ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ ಅಡಪ ಸಂಕಬೈಲು, ಕಾತರ್ಿಕ್ ಶೆಟ್ಟಿ .ಕೆ ಮಜಿಬೈಲು ಗೌರವ ಉಪಸ್ಥಿತರಿರುವರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮೀಂಜ ಬಂಟರ ಸಂಘದ ಅಧ್ಯಕ್ಷ ಜಗದೀಶ  ಶೆಟ್ಟಿ ಎಲಿಯಾಣ ಹಾಗೂ ಪ್ರಧಾನ ಕಾರ್ಯದಶರ್ಿ ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries