HEALTH TIPS

No title

              ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ  ಪ್ರತಿಷ್ಠಾ ವಾಷರ್ಿಕೋತ್ಸವ ಸಂಪನ್ನ
   ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಪ್ರತಿಷ್ಠಾ ವಾಷರ್ಿಕೋತ್ಸವವು ಸೋಮವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
   ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿ ಅವರ  ಕಾಮರ್ಿಕತ್ವದಲ್ಲಿ ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.  ಅಭಿಷೇಕ ಪೂಜೆ, ಉಷಃ ಪೂಜೆ, ಗಣಹೋಮ, ಕಲಶಾಭಿಷೇಕ, ಮಹಾ ಪೂಜೆ, ಶ್ರೀ ದೇವರ ಬಲಿ, ನೃತ್ತ ಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನದಾನ, ದೀಪಾರಾಧನೆ, ಶ್ರೀರಂಗಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು  ಬ್ರಹ್ಮಶ್ರೀ ಅರವತ್  ಶ್ರೀ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಜರಗಿದವು. ಅನಂತಪದ್ಮನಾಭ ಮಯ್ಯ  ಕ್ಷೇತ್ರ  ಪೂಜಾದಿಕಾರ್ಯಗಳನ್ನು ನೆರವೇರಿಸಿದರು. ಕ್ಷೇತ್ರ ಆಡಳಿತ ಮೊಕ್ತೇಸರ ಯನ್. ಸುಬ್ರಾಯ ಬಳ್ಳುಳ್ಳಾಯ ನೇತೃತ್ವ ವಹಿಸಿದರು. ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ಕಾರ್ಯಕ್ರಮ ಸಂಯೋಜನೆ ಮತ್ತು ನಿರ್ವಹಣೆ ಮಾಡಿದರು.
   ಬಳಿಕ ಶೇಣಿ ರಂಗ ಜಂಗಮ ಟ್ರಸ್ಟ್ ಕಾಸರಗೋಡು ಇದರ ನೇತೃತ್ವದಲ್ಲಿ ಶೇಣಿ ಶತಕ ಸರಣಿ - 4 ರ ಅಂಗವಾಗಿ ಶೇಣಿ ಸಂಸ್ಮರಣೆ ತಾಳಮದ್ದಲೆ ಅಭಿಯಾನ ಕಾರ್ಯಕ್ರಮವು ಜರಗಿತು.
        ಶ್ರೀ ರಂಗಪೂಜೆಯ ಬಳಿಕ  ಯಕ್ಷಯತೂಣೀರ ಸಂಪ್ರತಿಷ್ಠಾನ ಕೋಟೂರು ಇವರಿಂದ ರೂಪಿಸಲ್ಪಟ್ಟ ಯಕ್ಷಬಳಗ ಮುಳಿಯಾರು ಇದರ ಪ್ರಥಮ ವಾಷರ್ಿಕೋತ್ಸವದ ಅಂಗವಾಗಿ ಸಭಾಕಾರ್ಯಕ್ರಮ ಮತ್ತು ಬಾಲಕಲಾವಿದರಿಂದ  " ಮಧು ಕೈಟಭ - ಮಹಿಷಾಸುರ ' ಕಥಾಭಾಗ ಯಕ್ಷಗಾನ ಬಯಲಾಟವು ಜರಗಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries