HEALTH TIPS

No title

                   ಯಕ್ಷಗಾನ ತಾಳಮದ್ದಳೆ, ಬಯಲಾಟ
    ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 74 ನೇ ವಾಷರ್ಿಕೋತ್ಸವ ಹಾಗೂ ಕೀರಿಕ್ಕಾಡು ಪ್ರಶಸ್ತಿ ಪ್ರದಾನ, ಶೇಣಿ ಶತಮಾನ ಸ್ಮರಣೆಯ ಅಂಗವಾಗಿ ಇತ್ತೀಚೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
   ಸಂಘದ ಕಲಾವಿದರಿಂದ ಸಮರ ಸನ್ನಾಹ ಯಕ್ಷಗಾನ ತಾಳಮದ್ದಳೆ, ಸರೋಜಿನಿ ಬನಾರಿ ಅವರ ಶಿಷ್ಯೆಯರಿಂದ ಕಾಳಿಂಗ ಮರ್ಧನ ಯಕ್ಷಗಾನ ಬಯಲಾಟ ಹಾಗೂ ಸಂಘದ ಹಿರಿಯ ಕಲಾವಿದರಿಂದ ಭೀಮ-ದ್ರೌಪದಿ ಯಕ್ಷಗಾನ ತಾಳಮದ್ದಳೆ ಜರಗಿತು. ಪಾತ್ರಧಾರಿಗಳಾಗಿ ಡಾ.ರಮಾನಂದ ಬನಾರಿ ಮಂಜೇಶ್ವರ, ವೆಂಕಟ್ರಾಮ ಭಟ್ ಸುಳ್ಯ, ಬೆಳ್ಳಿಪ್ಪಾಡಿ ಸದಾಶಿವ ರೈ, ಡಿ.ವೆಂಕಟ್ರಮಣ ಭಟ್ ಮಾಸ್ತರ್ ದೇಲಂಪಾಡಿ ಭಾಗವಹಿಸಿದರು.
   ಸಂಘದ ಹಿರಿಯ ಭಾಗವತ, ಕವಿ, ಲೇಖನ ವಿಶ್ವ ವಿನೋದ ಬನಾರಿ ಅವರ ನಿದರ್ೇಶನದಲ್ಲಿ ಸಂಘದ ಖ್ಯಾತ ಕಲಾವಿದರಿಂದ ಇಂದ್ರಜಿತು ಕಾಳಗ-ಶ್ರೀಕೃಷ್ಣ ಅಗ್ರಪೂಜೆ ಯಕ್ಷಗಾನ ಬಯಲಾಟ ಜರಗಿತು. ಹಿಮ್ಮೇಳನದಲ್ಲಿ ಭಾಗವತರಾಗಿ ಹೊಸಮೂಲೆ ಗಣೇಶ ಭಟ್, ಮೃದಂಗ ಚೆಂಡೆವಾದನದಲ್ಲಿ ಖ್ಯಾತ ಕಲಾವಿದರಾದ ಕುಮಾರ ಸುಬ್ರಹ್ಮಣ್ಯ ವಳಕುಂಜ, ಅಂಬೆಮೂಲೆ ಶಿವಶಂಕರ ಭಟ್, ವಿಷ್ಣು ಶರಣ ಬನಾರಿ ಸಹಕರಿಸಿದರು. ಮಾಸ್ಟರ್ ನಾರಾಯಣ ದೇಲಂಪಾಡಿ, ಡಿ.ರಾಮಣ್ಣ ಮಾಸ್ಟರ್ ದೇಲಂಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘದ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ ಉಪಸ್ಥಿತರಿದ್ದರು. ನಂದಕಿಶೋರ ಬನಾರಿ ವಂದಿಸಿದರು.

  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries