HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಮಧೂರಿಗೆ ದೇವಸ್ವಂ ಬೋಡರ್್ ಅಧ್ಯಕ್ಷ ಓ.ಕೆ.ವಾಸು ಭೇಟಿ
     ಮಧೂರು: ಮಲಬಾರು ದೇವಸ್ವಂ ಬೋಡರ್್ನ ಅಧ್ಯಕ್ಷ ಓ.ಕೆ.ವಾಸು ಮತ್ತು ಸದಸ್ಯರುಗಳು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದರು.
    ಅವರು ದೇವಸ್ಥಾನದ ಜೀಣರ್ೋದ್ಧಾರ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ವಿಚಾರ ವಿನಿಮಯ ನಡೆಸಿದರು. ಕೆಲಸ ಕಾರ್ಯಗಳು ಅತೀ ಶೀಘ್ರದಲ್ಲೇ ನಡೆಯುವಂತೆ ಬೇಕಾದ ಸಲಹೆ ಸೂಚನೆಗಳನ್ನು ಹಾಗೂ ಪ್ರೋತ್ಸಾಹವನ್ನು ಈ ಸಂದರ್ಭದಲ್ಲಿ ಅವರು ನೀಡಿದರು.
    ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಯು.ಟಿ.ಆಳ್ವ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಜೀಣರ್ೋದ್ಧಾರ ಸಮಿತಿ ವತಿಯಿಂದ ಧನಸಂಗ್ರಹಾರ್ಥ ಆಯೋಜಿಸಲಾದ ನವೀಕರಣದ ಗ್ರಾನೈಟ್ ಕೂಪನ್ ಮತ್ತು ಕೋಪರ್ ಕೂಪನ್ಗಳನ್ನು ದೇವಸ್ವಂ ಬೋಡರ್್ನ ಅಧ್ಯಕ್ಷ ಓ.ಕೆ.ವಾಸು ಅವರು ಸ್ಥಳೀಯರಾದ ಸಂತೋಷ್ ಕುಮಾರ್ ನಾಕ್ ಮಧೂರು ಹಾಗೂ ಪ್ರಭಾಶಂಕರ ಮಾಸ್ಟರ್ ಕೊಲ್ಯ ಅವರಿಗೆ ನೀಡುವುದರೊಂದಿಗೆ ಉದ್ಘಾಟಿಸಿದರು. ದೇವಸ್ವಂ ಸ್ಥಾಯೀ ಸಮಿತಿ ಅಧ್ಯಕ್ಷ ಕೊಟ್ಟಾರ ವಾಸುದೇವನ್, ಸದಸ್ಯರಾದ ಎ.ಪ್ರದೀಪನ್, ಡಿ.ಎಸ್.ಶಿವಶಂಕರನ್, ವಿ.ಕೇಳವನ್, ಟಿ.ಕೆ.ಸುಬ್ರಹ್ಮಣ್ಯನ್, ದೇವಸ್ವಂ ಕಮೀಶನರ್ ಮುರಳಿ, ಅಸಿಸ್ಟೆಂಟ್ ಕಮೀಶನರ್ ಪಿ.ಕೆ.ವೃಂದ, ಎಂ.ಡಿ.ಬಿ. ಇನ್ಸ್ಪೆಕ್ಟರ್ ಉಮೇಶ್, ಕೃಷ್ಣನ್ ಕೆ.ವಿ.(ಜೆ.ಎ), ಎಕ್ಸಿಕ್ಯೂಟೀವ್ ಕೆ.ಬಾಬು ಮೊದಲಾದವರು ಉಪಸ್ಥಿತರಿದ್ದರು.
   ಶಿಲ್ಪಿಗಳಾದ ಎಸ್.ಎಂ.ಪ್ರಸಾದ್ ಮುನಿಯಂಗಳ, ತಂತ್ರಿವರ್ಯರಾದ ಡಾ.ದೇರೇಬೈಲ್ ಶಿವಪ್ರಸಾದ ತಂತ್ರಿ ಸೂಕ್ತ ಮಾರ್ಗದರ್ಶನ ನೀಡಿದರು. ಸಮಿತಿ ಸದಸ್ಯ ಕೆ.ವಿಷ್ಣು ಭಟ್  ಪ್ರಾರ್ಥನೆ ಹಾಡುವುದರೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಡಾ.ಬಿ.ಎಸ್.ರಾವ್ ಮೊದಲಾದವರು ನವೀಕರಣದ ಬಗ್ಗೆ ವಿವರಿಸಿದರು. ಸಮಿತಿ ಸದಸ್ಯ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ ವಂದಿಸಿದರು. ಜೀಣರ್ೋದ್ಧಾರ ಸಮಿತಿ ಸದಸ್ಯ ಕೆ.ನಾರಾಯಣಯ್ಯ ಮಧೂರು ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿಗಳ ಸದಸ್ಯರು ಹಾಗೂ ನೌಕರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries