HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಸಂಗೀತ ಶಿಬಿರ ಸಮಾರೋಪ- ಸಂಗೀತ ಪ್ರಿಯರನ್ನು ರಂಜಿಸಿದ ಟಿ.ಎಂ.ಕೃಷ್ಣ ಚೆನ್ನೈ ಹಾಡುಗಾರಿಕೆ
    ಮುಳ್ಳೇರಿಯ: ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಇದರ ಸಹಯೋಗದೊಂದಿಗೆ ರಾಗಸುಧಾರಸ ಕಾಸರಗೋಡು ಇದರ ಪ್ರಾಯೋಜಕತ್ವದಲ್ಲಿ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಸಂಗೀತ ಶಿಬಿರವು ಶುಕ್ರವಾರ ಸಂಪನ್ನಗೊಂಡಿತು.
     ಕಾರ್ಯಕ್ರಮದ ಅಂಗವಾಗಿ ಶಿಬಿರಾಥರ್ಿಗಳಿಂದ ಗಾಯನ ನಡೆದು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಗಸುಧಾರಸದ ಅಧ್ಯಕ್ಷ ಡಾ.ಶಂಕರ್ರಾಜ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಮಧೂರು ಬಾಲಸುಬ್ರಹ್ಮಣ್ಯ ಸರಳಾಯ ಮತ್ತು ಟಿ.ಎಂ.ಕೃಷ್ಣ ಚೆನ್ನೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಠಲ ರಾಮಮೂತರ್ಿ ಚೆನ್ನೈ ಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
   ವಿದ್ವಾನ್ ಟಿ.ಎಂ.ಕೃಷ್ಣ ಚೆನ್ನೈ ಅವರ ಹಾಡುಗಾರಿಕೆಯ ಕನರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಹಿನ್ನೆಲೆ ಸಂಗೀತದಲ್ಲಿ ವಯಲಿನ್ನಲ್ಲಿ ಕಲೈಮಾಮಣಿ ವಿಠಲ ರಾಮಮೂತರ್ಿ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಕೆ.ಅರುಣಪ್ರಕಾಶ್, ಶ್ರುತಿಯಲ್ಲಿ ಕೃತಿ ಭಟ್ ಸಹಕರಿಸಿದರು. ಅನನ್ಯ ಸ್ವಾಗತಿಸಿ, ಕೋಳಿಕ್ಕಜೆ ಬಾಲಸುಬ್ರಹ್ಮಣ್ಯ ಭಟ್ ನಿರೂಪಿಸಿ, ವಂದಿಸಿದರು.
    ಪ್ರಮುಖ ಸಂಗೀತ ವಿದ್ವಾಂಸರು, ಸಂಗೀತ ಶಿಬಿರಾಥರ್ಿಗಳು, ಸಂಗೀತಾಭಿಮಾನಿಗಳು ಒಳಗೊಂಡಂತೆ ಸಾವಿರಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries