HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಜಿಲ್ಲಾಧಿಕಾರಿಯಿಂದ ಗಿಳಿವಿಂಡು ಸಭಾಂಗಣ ಭವನಿಕಾ ವೀಕ್ಷಣೆ
                     ಕೊನೆಯ ಹಂತದಕಾಮಗಾರಿ ಶೀಘ್ರದಲ್ಲಿ ಪೂರ್ಣ
     ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧೀನದಲ್ಲಿ ನಿಮರ್ಾಣಗೊಂಡ ಸಭಾಂಗಣದಅಂತಿಮ ಹಂತದ ಒಳಾಂಗಣ ಕಾಮಗಾರಿಯನ್ನು ಕಾಸರಗೋಡು ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಭಾನುವಾರ ವೀಕ್ಷಿಸಿ ಅವಲೋಕನ ಸಭೆ ನಡೆಸಿದರು.
    ಸುಮಾರು 1 ಕೋಟಿ ವೆಚ್ಚದಲ್ಲಿ ನಿಮರ್ಾಣಗೊಂಡಿರುವ ಭವನಿಕಾ ರಂಗಮಂದಿರದ ಕೊನೆ ಹಂತದ  ನಿಮರ್ಾಣ ಕಾರ್ಯವು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಕೊನೆ ಹಂತದ ವಿದ್ಯುದೀಕರಣ ಸಹಿತ ಒಳಾಂಗಣ ರಂಗಸ್ಥಳದ ಶಬ್ದ ಪ್ರತಿಫಲನ ವ್ಯವಸ್ಥೆಯನ್ನು ಸರಿಪಡಿಸಿ ಟ್ರಸ್ಟ್ ಅಧೀನದ ರಂಗ ಮಂದಿರವನ್ನು ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಸಾಹಿತ್ತಿಕ ಚಟುವಟಿಕೆಗಳಿಗೆ ಏರ್ಪಡಿಸಲು ನೀಡಲಾಗುವುದು ಎಂದು ಅವರು ತಿಳಿಸಿದರು. ಶಬ್ದ ಪ್ರತಿಫಲಿಸದಂತೆ ಉತ್ತಮ ಅಕಾಸ್ಟಿಕ್ಸ್ ವ್ಯವಸ್ಥೆಯನ್ನು ಬೆಂಗಳೂರು ಮೂಲದ ಇಂಜಿನಿಯರ್ಗಳ ಸೂಕ್ತ ಮಾರ್ಗದರ್ಶನದಲ್ಲಿ ಕಲ್ಪಿಸಲಾಗುವುದು ಎಂದರು.
   ಕಳೆದ ವರ್ಷದ ಮಾಚರ್್ ತಿಂಗಳಲ್ಲಿ ಗಿಳಿವಿಂಡು ಸ್ಮಾರಕ ಸಮುಚ್ಚಯದ ನವೀಕೃತ ಕವಿ ನಿವಾಸ ಸಹಿತ ರಂಗ ಮಂದಿರವನ್ನು ಕನರ್ಾಟಕ ಮತ್ತು ಕೇರಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪನೆಗೊಳಿಸಲಾಗಿತ್ತು. ಭವನಿಕಾ ರಂಗ ಮಂದಿರ ವೀಕ್ಷಣೆ ಸಂದರ್ಭ ಗಿಳಿವಿಂಡು ಸ್ಮಾರಕ ಸಮುಚ್ಚಯದ ಕಾರ್ಯದಶರ್ಿ ಕೆ.ಆರ್.ಜಯಾನಂದ, ಖಜಾಂಜಿ ಬಿ.ವಿ.ಕಕ್ಕಿಲ್ಲಾಯ, ಎಂಜಿನಿಯರ್ ನರಸಿಂಹ ಸ್ವಾಮಿ ಉಪಸ್ಥಿತರಿದ್ದರು.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries