HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ವಕರ್ಾಡಿ ಪಿ.ಇ.ಸಿ ಯಲ್ಲಿ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ
     ಮಂಜೇಶ್ವರ: ವಕರ್ಾಡಿ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸಮಿತಿಯ ಆಶ್ರಯದಲ್ಲಿ ವಕರ್ಾಡಿ ಪಂಚಾಯತಿಗೊಳಪಟ್ಟ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವು ಪಂಚಾಯತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
   ಸಮಾರಂಭದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆಸಿಂತಾ ಡಿ'ಸೋಜರವರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ವಕರ್ಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅವರು ನೆರವೇರಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುನೀತಾ ಡಿ'ಸೋಜ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ರೆಹಮತ್ ರಜಾಕ್, ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷೆ ತುಳಸಿ ಕುಮಾರಿ, ಸದಸ್ಯರುಗಳಾದ ಗೋಪಾಲಕೃಷ್ಣ ಪಜ್ಜ, ಸದಾಶಿವ ನಾಯಕ್,  ಸೀತಾ, ವಸಂತ, ಗೀತಾ ಸಾಮಾನಿ, ಪಿ.ಇ.ಸಿ. ಸದಸ್ಯ ಅಬ್ದುಲ್ ರಜಾಕ್ ಮೊದಲಾದವರು ಉಪಸ್ಥಿತರಿದ್ದರು.
   ಈ ಸಂದರ್ಭದಲ್ಲಿ ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯ ದೈಹಿಕ ಶಿಕ್ಷಕರಾದ  ಚಂದ್ರಶೇಖರ್ ರೈ , ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ ಭಟ್, ಆನೆಕಲ್ಲು ಅನುದಾನಿತ ಶಾಲಾ ಮುಖ್ಯ ಶಿಕ್ಷಕಿ ಕುಮಾರಿ ಟೀಚರ್ ಮತ್ತು ಕೊಡ್ಲಮೋರು ಅನುದಾನಿತ ಶಾಲಾ ಹಿಂದಿ ಶಿಕ್ಷಕ ಶ್ರೀನಿವಾಸ್ ಭಟ್  ಸೇರಾಜೆ ಅವರನ್ನು ಸಮ್ಮಾನಿಸಲಾಯಿತು. ಮೋಹನ ಮಾಸ್ಟರ್ರವರು ನಿವೃತ್ತ ಶಿಕ್ಷಕರ ಸಾಧನೆಗಳ ಕುರಿತು ಕಿರು ಪರಿಚಯವನ್ನಿತ್ತರು. ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಶಿಕ್ಷಕಿ ಕವಿತಾ ಟೀಚರ್ ಪ್ರಾರ್ಥನೆಯನ್ನು ಹಾಡಿದರು. ಬಳಿಕ ನಡೆದ ಪಿ.ಇ.ಸಿ. ಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್  ಹಾಗೂ ಬಿ.ಆರ್.ಸಿ. ತರಬೇತುದಾರೆ ಸುಜಾತ ಟೀಚರ್ ಉಪಸ್ಥಿತರಿದ್ದರು. ಬಾಕ್ರಬೈಲು ಅನುದಾನಿತ ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ  ವಂದಿಸಿದರು. ಪಿ.ಇ.ಸಿ. ಕಾರ್ಯದಶರ್ಿ ಸುರೇಶ ಬಂಗೇರ ಕಾರ್ಯಕ್ರಮನ್ನು ನಿರೂಪಿಸಿದರು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries