HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಮಂಜೇಶ್ವರದಲ್ಲಿ ಹೋಂ ಗಾಡರ್್ ನೇಮಿಸುವಂತೆ ಆಗ್ರಹ 
     ಮಂಜೇಶ್ವರ: ಮಂಜೇಶ್ವರ ರಾ.ಹೆದ್ದಾರಿಯಲ್ಲಿ ಮಂಜೇಶ್ವರ ಹೈವೇ ಜಂಕ್ಷನ್ ಜನಸಂದಣಿ ಇರುವ ಮತ್ತು ಬಸ್ ನಿಲುಗಡೆಯ ಪ್ರದೇಶ. ಇಲ್ಲಿ ದಿನಾ ರಸ್ತೆ ದಾಟಲು ನೂರಾರು ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ಶಾಲಾ ಕಾಲೇಜು ವಿದ್ಯಾಥರ್ಿಗಳು ಸಂಕಷ್ಟ ಪಡುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿಂಚಿನ ವೇಗದಲ್ಲಿ ಸಾಗುವ ವಾಹನಗಳಿಂದಾಗಿ ರಸ್ತೆ ದಾಟುವುದು ಕಷ್ಟಕರ. ನಾನಾ ಅಗತ್ಯಗಳಿಗೆ ಆಸ್ಪತ್ರೆ, ಸರಕಾರಿ ಕಚೇರಿ, ಶಾಲೆ, ಕಾಲೇಜು, ರೈಲು ನಿಲ್ದಾಣ ಹೀಗೆ ಹಲವು ಸಂಸ್ಥೆಗಳಿಗೆ ಹೋಗುವವರ ರಸ್ತೆ ದಾಟುವ ಸಮಸ್ಯೆ ತೀವ್ರಗೊಂಡು ಸಂಕಷ್ಟಕರವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ವಿದ್ಯಾಥರ್ಿಗಳ ಸಹಿತ ರೈಲು ಗಾಡಿಗೆ ಹೋಗುವವರು ಮತ್ತು ಬರುವಾಗಲು ರಸ್ತೆ ದಾಟುವ ಸಂದರ್ಭ ಈ ಸಮಸ್ಯೆ ವ್ಯಾಪಕವಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಹೋಂಗಾಡರ್್ ನೇಮಿಸಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಸಿಐಟಿಯು ಆಟೋ ರಿಕ್ಷಾ ಚಾಲಕರ ಯೂನಿಯನ್ ಮಂಜೇಶ್ವರ  ಕಾರ್ಯದಶರ್ಿ ಅಶ್ರಫ್ ಗುಡ್ಡಕೇರಿ ಅವರ ನೇತೃತ್ವದಲ್ಲಿ ಮೊದೀನ್ ಕುಂಞಿ ಕಾಡರ್ಿಯರ್, ಪೋಡಿಯ ಸಸಿಹಿತ್ಲು ಮೊದಲಾದವರ ಮುಖಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries