HEALTH TIPS

No title

                    ಬಡತನ ನಿವಾರಣೆ ಬಗ್ಗೆ ತಿಳಿವಳಿಕೆ ಶಿಬಿರ
    ಕಾಸರಗೋಡು: ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಡತನ ನಿಮರ್ೂಲನೆ ಯೋಜನೆ ಬಗ್ಗೆ ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಮಹಿಳಾ ಸದಸ್ಯರಿಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ತಿಳಿವಳಿಕೆ ಶಿಬಿರ ನಡೆಯಿತು.
   ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ(ದ್ವಿತೀಯ)ದ ನ್ಯಾಯಾಧೀಶೆ ಟಿ.ಕೆ.ನಿರ್ಮಲ ಉದ್ಘಾಟಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸುತ್ತಿರುವ ಬಡತನ ನಿಮರ್ೂಲನೆ ಯೋಜನೆಗಳು ಸಮಪರ್ಕವಾದ ರೀತಿಯಲ್ಲಿ ಜಾರಿಗೊಂಡಲ್ಲಿ ದೇಶದಲ್ಲಿ ಬಡತನವೇ ಇರದೆಂದೂ ಅದರಿಂದಾಗಿ ಈ ಯೋಜನೆಯನ್ನು ಸಮರ್ಪಕವಾದ ರೀತಿಯಲ್ಲಿ ಜಾರಿಗೊಳಿಸುವಂತೆ ಇದೇ ಸಂದರ್ಭದಲ್ಲಿ ನ್ಯಾಯಾಧೀಶೆ ನಿರ್ಮಲ ಟಿ.ಕೆ. ಕರೆ ನೀಡಿದರು.
    ಜಿಲ್ಲಾ ಪಂಚಾಯತ್ ಸದಸ್ಯೆ ಪಿ.ವಿ.ಉಷಾ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಬ್ಲಿಕ್ ಪ್ರೋಸಿಕ್ಯೂಟರ್ ಪಿ.ವಿ.ಜಯರಾಜನ್, ಬಾರ್ ಅಸೋಸಿಯೇಶನ್ ಕಾರ್ಯದಶರ್ಿ ಪಿ.ರಾಘವನ್ ಶುಭಹಾರೈಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದಶರ್ಿ ಸಬ್ ಜಡ್ಜ್ ಪಿಲಿಫ್ ಥೋಮಸ್ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೆಕ್ಷನ್ ಆಫೀಸರ್ ದಿನೇಶ್ ಕೋಡಂಗೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
   ಕಾನೂನು ಸೇವಾ ಪ್ರಾಧಿಕಾರದ ಸೇವೆಗಳು ಎಂಬ ವಿಷಯದ ಬಗ್ಗೆ ಸಬ್ ಜಡ್ಜ್ ಪಿಲಿಫ್ ಥೋಮಸ್, ಕೇಂದ್ರ ಮತ್ತು ರಾಜ್ಯ ಸರಕಾರದ ಬಡತನ ನಿವಾರಣೆ ಯೋಜನೆಗಳ ಬಗ್ಗೆ ಅಸಿಸ್ಟೆಂಟ್ ಕಮಿಷನರ್ ಬೆವಿನ್ ತರಗತಿ ನಡೆಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries