HEALTH TIPS

ಯಾವುದೇ ಶೀರ್ಷಿಕೆಯಿಲ್ಲ

     ಕಡಲು ಕೊರೆತ ಸ್ಥಳಗಳಿಗೆ ಬಿಜೆಪಿ ನಿಯೋಗ ಭೇಟಿ, ಪರಿಶೀಲನೆ
     ಮಂಜೇಶ್ವರ ಶಾಸಕರ, ಹಾಗೂ ಸಂಸದರ ಬೇಜವಾಬ್ದಾರಿತನ ಕೆ.ಶ್ರೀಕಾಂತ್
   ಉಪ್ಪಳ: ಮಂಗಲ್ಪಾಡಿ ಹನುಮಾನ್ ನಗರ, ಶಾರದಾ ನಗರ ಕಡಪರ ಪ್ರದೇಶಗಳಲ್ಲಿ ಕಡಲು ಕೊರೆತ ಅವ್ಯಾಹತವಾಗಿದ್ದು ಪ್ರದೇಶದ ಜನತೆ ಮೀನುಗಾರ ಕುಟುಂಬ ಭಯ ಭೀತಿಯಿಂದ ದಿನ ಕಲಿಯಬೇಕಾದ ಪರಿಸ್ಥಿತಿ ಗಂಭೀರವಾಗಿದೆ. ಬೀಚ್ ಸಂಪರ್ಕ ರಸ್ತೆಗಳೆಲ್ಲ ಸಮುದ್ರ ಪಾಲಾಗಿದ್ದು ನಿತ್ಯ ಸಂಚಾರಕ್ಕೆ ಅಡಚಣೆ ಯಾಗಿದೆ.
    ದಶಕಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದು, ಕಳೆದ ಕೆಲವು ವರ್ಷಗಳಿಂದ ಪರಿಸ್ಥಿತಿ ಹದಗೆಟ್ಟಿದೆ. ಆದರೂ ಮಂಜೇಶ್ವರ ಶಾಸಕರಗಲಿ ಕಾಸರಗೋಡು ಸಂಸದರು, ಸ್ಥಳೀಯಾಡಳಿಗಳ ನಿರ್ಲಕ್ಷ್ಯದಿಂದ ಜನತೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾ.ಶ್ರೀಕಾಂತ್ ಅಧಿಕಾರಿಗಳ ಹಾಗೂ ರಾಜ್ಯ ಸರಕಾರದ ನಡೆಯನ್ನು ಖಂಡಿಸಿದರು. ಕೂಡಲೇ ಸ್ಥಳೀಯ ಮೀನುಗಾರರಿಗೆ ಉಚಿತ ಪಡಿತರ ಹಾಗೂ ಉಚಿತ ವೈದ್ಯಕೀಯ ವ್ಯವಸ್ಥೆ ಮಾಡಬೇಕು.ಜೊತೆಗೆ ಸಂಪರ್ಕ ರಸ್ತೆಯ ದುರಸ್ತಿ , ಕೊರೆತ ತಡೆಗೆ ಬೃಹತ್ ಕಲ್ಲುಗಳನ್ನು ಸಮುದ್ರ ತಡೆಗೆ ಹಾಕಬೇಕೆಂದು ಬಿಜೆಪಿ ಆಗ್ರಹಿಸಿದೆ.
   ಬುಧವಾರ ಹನುಮಾನ್ ನಗರ, ಶಾರದಾ ನಗರಗಳ ಸಂತ್ರಸ್ಥ ಕಡಪ್ಪರ ಪ್ರದೇಶಗಳಿಗೆ ಭೇಟಿ ನೀಡಿದ ಬಿಜೆಪಿ ನಿಯೋಗದಲ್ಲಿ   ಜಿಲ್ಲಾಧ್ಯಕ್ಷರ ಜೊತೆಗೆ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಪ್ರ.ಕಾರ್ಯದಶರ್ಿ ಆದಶರ್್ ಬಿಎಂ,  ಮಂಗಲ್ಪಾಡಿ ಪಂಚಾಯತಿ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಮುಖಂಡರುಗಳಾದ ಬಾಲಕೃಷ್ಣ ಅಂಬಾರ್, ಮಹೇಶ್ ಕೆವಿ, ರಂಜಿತ್ ಶಾರದಾ ನಗರ, ಹರಿಶ್ಚಂದ್ರ ಎಂ, ರಾಜೇಶ್, ತಾರನಾಥ್ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದು, ಪರಿಹಾರೋಪಾಯಗಳ ಬಗ್ಗೆ ಚಚರ್ಿಸಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries