HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಪ್ಲಾಸ್ಟಿಕ್ ಮುಕ್ತ ಪರಿಸರ ನಿಮರ್ಾಣ ಮಾಡೋಣ : ಕೆ.ಎನ್ ಕೃಷ್ಣಭಟ್
   ಬದಿಯಡ್ಕ:  ಪರಿಸರವನ್ನು ಸ್ವಚ್ಚವಾಗಿಡಲು, ಪ್ಲಾಸ್ಟಿಕ್ ಮುಕ್ತಗೊಳಿಸುವಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ವತರ್ಿಸಬೇಕು. ನಮ್ಮ ಪರಿಸರವನ್ನು ಸ್ಚಚ್ಚವಾಗಿಡೋಣ. ಪ್ಲಾಸ್ಟಿಕ್ ತ್ಯಾಜಗಳನ್ನು ಮರುಬಳಕೆಗೆ ನೀಡಬೇಕು. ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಯಲು ಮನೆ ಶಾಲೆಗಳಲ್ಲಿ ಶ್ರಮಿಸಬೇಕೆಂದು  ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷ , ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವ್ಯವಸ್ಥಾಪಕರೂ ಆದ ಕೆ.ಎನ್ ಕೃಷ್ಣ ಭಟ್  ವಿಶ್ವ ಪರಿಸರ ದಿನದ ಅಂಗವಾಗಿ ಬದಿಯಡ್ಕ ಕೃಷಿಭವನ, ನೆಹರೂ ಯುವಕೇಂದ್ರ ವತಿಯಿಂದ ಉಚಿತ ಬೀಜ ವಿತರಣೆ ಹಾಗೂ ಗಿಡ ವಿತರಣೆ ಕಾರ್ಯಕ್ರಮವನ್ನು ಶಾಲಾ ಪರಿಸರದಲ್ಲಿ ಉದ್ಘಾಟನೆಗೈದು ನುಡಿದರು.
  ಕೃಪಿಭವನ ಬದಿಯಡ್ಕದ ಕೃಷಿ ಅಧಿಕಾರಿ ಮೀರಾ ಅಧ್ಯಕ್ಷತೆ ವಹಿಸಿದ್ದರು. ನೆಹರೂ ಯುವ ಕೇಂದ್ರ ಸುರಕ್ಷಾ ಪ್ರೊಜೆಕ್ಟ್ ಹಿರಿಯ ಕಾರ್ಯಕರ್ತ  ನಾರಾಯಣ ಪಿ.ಪೆರಡಾಲ, ಕಿಳಿಂಗಾರು ಶಾಲಾ ಮುಖ್ಯೋಪಾಧ್ಯಾಯ ಕೆ.ರಾಮಕೃಷ್ಣ ಭಟ್ ಪರಿಸರ ದಿನದ ಮಹತ್ವದ ಕುರಿತು ಮಾತನಾಡಿದರು.
     ಕಾಸರಗೋಡು ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲ ನಾಯ್ಕ್, ಕಿಳಿಂಗಾರು ಶಾಲಾ ಅಧ್ಯಾಪಿಕೆಯರಾದ ಮಧುಮತಿ ಕಂಬಾರ್, ಶ್ರೀವಿದ್ಯಾ , ಸುನಿತಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನೀಚರ್ಾಲು ವಲಯ ಸಂಚಾಲಕಿ ನಳಿನಿ, ಶಾಲಾ ಮಾತೃಸಂಘದ ಅಧ್ಯಕ್ಷೆ ಭಾರತಿ ಮೊದಲಾದವರು ಉಪಸ್ಥಿತರಿದ್ದರು.
    ಬದಿಯಡ್ಕ ಕೃಷಿಭವನದ ಸಹಾಯಕ ಅಧಿಕಾರಿ ಜಯರಾಮ ಸ್ವಾಗತಿಸಿ , ಶಾಲಾ ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries