HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಛಲ ಹಾಗು ಏಕಾಗ್ರತೆಯೇ ಸಾಧನೆಗೆ ಸುಲಭ ಮೆಟ್ಟಿಲು: ಮೊಹಮ್ಮದ್ ಆಲಿ ಪೆರ್ಲ
    ಪೆರ್ಲ:ವಿದ್ಯಾಥರ್ಿಯ ಶೈಕ್ಷಣಿಕ ಸಾಧನೆಗೆ ಛಲ ಹಾಗೂ ಏಕಾಗ್ರತೆ ಬಲುಮುಖ್ಯ. ಇವುಗಳಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೇ ಆದರೂ ಎದುರಿಸುವ ಸಾಮಥ್ರ್ಯ ವಿದ್ಯಾಥರ್ಿಗಳಿಗೆ ಬರುತ್ತದೆ ಎಂದು ನಿವೃತ್ತ ಉಪ ನೊಂದಾವಣಾ ಅಧಿಕಾರಿ  ಮೊಹಮ್ಮದ್ ಆಲಿ ಪೆರ್ಲ ಅಭಿಪ್ರಾಯಪಟ್ಟರು.
   ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ನಡೆದ ಪ್ಲಸ್ ವನ್ ವಿದ್ಯಾಥರ್ಿಗಳ  ಪ್ರವೇಶೋತ್ಸವ ಹಾಗೂ ಕಳೆದ ಮಾಚರ್್ ತಿಂಗಳಲ್ಲಿ ನಡೆದ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಶ್ರೇಷ್ಠ ಸಾಧನೆಗೈದ ವಿದ್ಯಾಥರ್ಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತಿದ್ದರು.
   ವಿದ್ಯಾಥರ್ಿಗಳು ನಗರ ಪ್ರದೇಶಗಳಲ್ಲಿ ದುಶ್ಚಟಗಳಿಗೆ ಬಲಿಯಾಗುವುದು ಕಳವಳಕಾರಿಯಾದ ವಿಷಯವಾಗಿದೆ.ಹಳ್ಳಿ ಪ್ರದೇಶಗಳಿಗೆ ಅವು ತಲುಪದಂತೆ ಜಾಗರೂಕರಾಗಿರಬೆಕು. ಶಿಸ್ತುಬದ್ಧ ಶಿಕ್ಷಣ ನೀಡಿದರೆ ಮಾತ್ರ ವಿದ್ಯಾಥರ್ಿಗಳಿಗೆ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ. ಶಾಲೆಯ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾಥರ್ಿಗಳು ಕ್ರಿಯಾತ್ಮಕವಾಗಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು.   
   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ವ್ಯವಸ್ಥಾಪಕ ಮಿತ್ತೂರು ಪುರುಷೋತ್ತಮ ಭಟ್ ವಿದ್ಯಾಭ್ಯಾಸ ರಂಗದಲ್ಲಿ ವಿದ್ಯಾಥರ್ಿಗಳ ಸಾಧನೆಗೆ ಅಧ್ಯಾಪಕರಂತೆ ಹೆತ್ತವರು ಕೂಡ ಶ್ರಮಪಡಬೇಕು. ಸಮೂಹ ಮಾಧ್ಯಮದ ಅತಿಯಾದ ಉಪಯೋಗ ಕಲಿಕೆಗೆ ದೋಷಕಾರಿ ಎಂದು ತಿಳಿಸಿದರು.
   ಸುಬ್ರಹ್ಮಣ್ಯೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಜೀವ ರೈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಅಭಿನಂದಿಸಿ ನೂತನ ವಿದ್ಯಾಥರ್ಿಗಳಿಗೆ ಶುಭಕೋರಿದರು .ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಚಾಕಟೆ ಗೋಪಾಲಕೃಷ್ಣ ಭಟ್, ಶಿವರಾಮ್ ಭಟ್, ಸಂದೇಶ್ ರೈ ಮಾತನಾಡಿದರು.ಸಮಾರಂಭದಲ್ಲಿ ಕಳೆದ ಸಾಲಿನ ಪ್ಲಸ್ ಟು ಪರೀಕ್ಷೆಯಲ್ಲಿ ಶೇ.100 ಅಂಕಗಳಿಸಿ ತೇರ್ಗಡೆಗೊಂಡ ಫಾತಿಮತ್ ಹಸ್ಯಾಳನ್ನು ವಿಶೇಷವಾಗಿ ಅಭಿನಂದಿಸಲಾಯಿತು.

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries