HEALTH TIPS

No title

               ಜೈ ಶ್ರೀರಾಮ್ ನಿಂದ ಧನ ಸಹಾಯ ವಿತರಣೆ
    ಮಂಜೇಶ್ವರ: ಮಂಜೇಶ್ವರದ ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ  ಜುಲೈ ತಿಂಗಳ 15 ನೇ ಯೋಜನೆಯ ಸಹಾಯ ಹಸ್ತವನ್ನು ವಕರ್ಾಡಿ ಗ್ರಾಮ ಪಂಚಾಯತಿ ತೋಕೆ ನಿವಾಸಿ ಹರಿಶ್ಚಂದ್ರ ಶೆಟ್ಟಿಗಾರ್ರ ಪತ್ನಿ ಗೀತಾ ಶೆಟ್ಟಿಗಾರ್ (45) ಇವರಿಗೆ ಭಾನುವಾರ ನೀಡಲಾಯೀತು.
  ಗೀತರವರು ಅಬರ್ುದ  ರೋಗದಿಂದ ಬಳಲುತ್ತಿದ್ದಾರೆ. ಇವರ ಪತಿ ಕೂಲಿ ಕೆಲಸ  ಮಾಡುತ್ತಿದ್ದು, ಮೂವರು ಮಕ್ಕಳ ವಿದ್ಯಾಭ್ಯಾಸದ ಖಚರ್ು, ದಿನ ನಿತ್ಯದ ಮನೆ ಖಚರ್ು, ಪತ್ನಿಯ ಔಷಧಿಯ ಖಚರ್ು ನಿಭಾಯಿಸಲು ಕಷ್ಟಕರವಾಗಿದೆ.  ಇವರ ಓವರ್ೆ ಪುತ್ರಿ ಓದುವಿಕೆಯಲ್ಲಿ ಮುಂದಿದ್ದರೂ ಮನೆಯ ಕಷ್ಟದ ನಡುವೆ ವಿಧ್ಯಾಭ್ಯಾಸ ಅರ್ಧದಲ್ಲಿ ಮೊಟಕುಗೊಳಿಸುವ ಸಂದರ್ಭ ಎದುರಾಗಿದೆ. ಮನೆ ಕೆಲಸ ನಿರ್ವಹಿಸಿ ಶಾಲೆಗೆ ತೆರಳಬೇಕಾಗಿದೆ. ಇವರ ಸಂಕಷ್ಟದ ಬದುಕಿನ ಬವಣೆಯನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯು ತಮ್ಮ ಸದಸ್ಯರಿಂದಲೇ ಸಂಗ್ರಹಿಸಿದ ಮೊತ್ತವನ್ನು ಭಾನುವಾರ ಸಂಜೆ ಗೀತರ ಮನೆಗೆ ತೆರಳಿ ಗೀತರ ಪತಿ ಹರಿಶ್ಚಂದ್ರ ಶೆಟ್ಟಿಗಾರರಿಗೆ ಸಂಸ್ಥೆಯ ಗೌರವ ಮಾರ್ಗದರ್ಶಕ ರಾಜ ಬೆಳ್ಚಪ್ಪಾಡರವರು ನೀಡಿದರು. ಸಂಸ್ಥೆಯ ಪಧಾಧಿಕಾರಿಗಳಾದ ಆಶಾ ಲೋಕೇಶ್ ಮಾಡ, ಗಿರಿ ವೀರನಗರ, ರತನ್  ಕುಮಾರ್ ಹೊಸಂಗಡಿ, ಪ್ರದೀಪ್ ಮುರತ್ತಣೆ, ಲೋಕೇಶ್ ಮಾಡ, ಸುಕೇಶ್ ಬೆಜ್ಜ, ಸತ್ಯ ವೀರನಗರ,  ಸುರೇಶ್ ಶೆಟ್ಟಿ ಪರಂಕಿಲ, ಕಿಶೋರ್ ಭಗವತಿ, ಗಿರೀಶ್ ಮುನ್ನಿಪ್ಪಾಡಿ, ರೂಪೇಶ್ ಜೋಡುಕಲ್ಲು, ರಾಜೇಶ್ ಅಂಗಡಿಪದವು, ತುಳಸಿದಾಸ್ ಮಂಜೇಶ್ವರ, ದೀಪಕ್ ರಾಜ್ ಉಪ್ಪಳ, ವಸಂತ್ ಶೆಟ್ಟಿಗಾರ್ ಬೋರ್ಕಳ,ಸಂದೇಶ್ ಕಡಂಬಾರ್ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries