HEALTH TIPS

No title

                 ಸಂಶೋಧನೆಯ ಮೂಲ ಪ್ರಕೃತಿ ಹಾಗೂ ಮಗು : ಡಾ.ವಮರ್ುಡಿ
     ಪೆರ್ಲ: ಪೆರ್ಲದ ನಾಲಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ಆರಂಭಿಸಿರುವ ಸಟರ್ಿಫಿಕೇಟ್ ಕೊಸರ್್ ಆದ ಸವರ್ೆ ರಿಸರ್ಚ ಇದರ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಭವನದಲ್ಲಿ ಜರಗಿತು.
    ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ಸ್ನಾತಕೋತ್ತರ ಮತ್ತು  ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ವಿ.ಕಾರಂತ ಅವರು ಮಾತನಾಡಿ, ಸಂಶೋಧನೆಯಿಂದ ದೊರಕಬೇಕಾದ ವಿವಿಧ ಅವಕಾಶಗಳ ಬಗ್ಗೆ ಮಾಹಿತಿಗಳನ್ನ ತಿಳಿಸಿದರು. ಸಂಶೋಧನೆ ಎಂಬುದು ಯಾಕಾಗಿ ಮತ್ತು ಇದರ ವಿಧಾನಗಳ ಬಗ್ಗೆ ಅವರು ಮಾಹಿತಿಯನ್ನು  ಒದಗಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ವಿಘ್ನೇಶ್ವರ ವಮರ್ುಡಿಯವರು ವಹಿಸಿ ಮಾತನಾಡಿ, ಸಂಶೋಧನಾ ಪ್ರವೃತ್ತಿಯು ಸಣ್ಣ ಮಗುವಿಂದಲೇ ಆರಂಭವಾಗಿ ಮುಂದೆ ಬೆಳೆಯುತ್ತಾ ಹೋಗಿ ವಿಷಯಾಧಾರಿತ ಅಧ್ಯಯನದಲ್ಲಿ  ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಸಂಶೋಧನೆಗಳ ಮೂಲ ಕುತೂಹಲ. ಈ ಕುತೂಹಲ ಮುಂದುವರಿಯುತ್ತಾ ಹೋಗಿ ಆವಿಷ್ಕಾರಗಳಿಗೆ ದಾರಿಮಾಡಿಕೊಡುತ್ತದೆ ಎಂದರು. 
    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರ್ಯನಿರ್ವಹಣಾಕಾರಿ ಕೆ.ಶಿವಕುಮಾರ್ ಶುಭಹಾರೈಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ತ ಪ್ರೊ.ಶಂಕರ ಖಂಡಿಗೆ ಸ್ವಾಗತಿಸಿ, ಪ್ರೊ.ಅಮೃತಾ ಎ.  ವಂದಿಸಿದರು. ಪ್ರೊ.ಗೀತಾ ವಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries