HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಡಿವೈಎಫ್ಐ ಬ್ಲಾಕ್ ಸಮ್ಮೇಳನದ ಪೂರ್ವಭಾವೀ ಧ್ವಜಸ್ತಂಭ ಮೆರವಣಿಗೆ
    ಮಂಜೇಶ್ವರ: ಮೀಯಪದವಿನಲ್ಲಿ ನಡೆಯಲಿರುವ ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಸಮ್ಮೇಳನದ ಪೂರ್ವಭಾವಿಯಾಗಿ ಶನಿವಾರ ನಡೆದ ಧ್ವಜಸ್ತಂಭ ಜಾಥಾವನ್ನು ಮಜಿಬೈಲು ದಿ.ಸಚ್ಚೀಂದ್ರ ಶೆಟ್ಟಿ ಸ್ಮೃತಿಮಂಟಪದಿಂದ ತರಲಾಯಿತು.
   ಜಾಥಾ ನಾಯಕ ಅರವಿಂದ ಸಿ. ಜಾಥಾ ಉದ್ಘಾಟಿಸಿದರು. ದಿ.ಸಚ್ಚಿಂದ್ರ ಶೆಟ್ಟಿಯವರ ಧರ್ಮಪತ್ನಿ ಸೀತಾ ಶೆಟ್ಟಿ ಧ್ವಜಸ್ತಂಭವನ್ನು ಜಾಥಾ ಮುಖಂಡ ಪ್ರಶಾಂತ್ ಕನಿಲರಿಗೆ ಈ ಸಂದರ್ಭ ಹಸ್ತಾಂತರಿಸಿದರು. ಪ್ರಭಾಕರ ಶೆಟ್ಟಿ ಮಂಜನಹಿತ್ಲು ಅಧ್ಯಕ್ಷತೆ ವಹಿಸಿದ್ದರು. ಭಾರತೀ ಸುಳ್ಯಮೆ, ಮಹೇಶ್ ಚಿಗುರುಪಾದೆ, ಅಕ್ಷಯ್ ಎಲಿಯಾಣ, ವಿಶ್ವನಾಥ ಶೆಟ್ಟಿ ಕರಿಬೈಲು, ರಾಜಾರಾಮ ಆಳ್ವ ಕರಿಬೈಲು, ಹರೀಶ್ ಶೆಟ್ಟಿ, ಲೋಕೇಶ್ ಎಲಿಯಾಣ, ರಾಮಚಂದ್ರ ಟಿ, ವಿನಯಕುಮಾರ್ ಬಾಯಾರು, ರಮೇಶ್ ಸುವರ್ಣ ಜಾಥಾದ ನೇತೃತ್ವ ವಹಿಸಿದ್ದರು.
    ಈ ಸಂದರ್ಭ ದಿ.ಬಿ.ಎ. ಮೊಹಮ್ಮದ್ ಸುಬ್ಬಯ್ಯಕಟ್ಟೆ ಸ್ಮೃತಿಮಂಟಪದಿಂದ ಹೊರಟ ಧ್ವಜ ಪತಾಕೆ ಜಾಥಾವನ್ನು ಸಿಪಿಐಎಂ ಜಿಲ್ಲಾ ಸದಸ್ಯ ಕೆ.ಆರ್.ಜಯಾನಂದ ಅವರು ಜಾಥಾ ನಾಯಕ, ಡಿವೈಎಫ್ಐ ಬ್ಲಾಕ್ ಕಾರ್ಯದಶರ್ಿ ಸಾದಿಕ್ ಚೆರುಗೋಳಿ ಯವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
   ಎರಡೂ ಕಡೆಗಳಿಂದ ಹೊರಟ ಜಾಥಾ ಮೀಯಪದವು ಸಮ್ಮೇಳನ ನಗರಿಗೆ ತಲಪಿದಾಗ ಸ್ವಾಗತ ನೀಡಲಾಯಿತು. ಸಿಪಿಐಎಂ ಮೀಂಜ ಘಟಕದ ಕಾರ್ಯದಶರ್ಿ ಅರವಿಂದ ಸಿ. ಧ್ವಜಾರೋಹಣಗೈದು ಸಮ್ಮೇಳನಕ್ಕೆ ಚಾಲನೆ ನೀಡಿದರು. ಸಾದಿಕ್ ಚೆರುಗೋಳಿ, ಪ್ರಶಾಂತ್ ಕನಿಲ ಮೊದಲಾದವರು ಶುಭಾಶಂಸನೆಗೈದರು.

     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries