HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಶಾಲಾ ವಿದ್ಯಾಥರ್ಿಗಳಿಗೆ ಗದ್ದೆ ಬೇಸಾಯದ ಬಗ್ಗೆ ಮಾಹಿತಿ ಶಿಬಿರ
                     ನೂತನ ನೇಜಿ ನೆಡುವ ಯಂತ್ರದ ಪರಿಚಯ
    ಉಪ್ಪಳ: ಶಾಲಾ ವಿದ್ಯಾಥರ್ಿಗಳಿಗೆ ಆಧುನಿಕ ಹಾಗೂ ಪಾರಂಪಾರಿಕ ಗದ್ದೆ ಬೇಸಾಯದ ಬಗ್ಗೆ ಮಾಹಿತಿ ನೀಡುವ ಏಕದಿನ ಶಿಬಿರವು ಬಾಯಾರು ಸಮೀಪದ ವಾಟೆತ್ತಿಲ ಗುವೆಲುಗದ್ದೆ ಪ್ರದೇಶದಲ್ಲಿ ನಡೆಯಿತು. ಶಿಬಿರದಲ್ಲಿ ಭಾಗವಹಿಸಿದ ಸಜಂಕಿಲ  ದುಗರ್ಾಪರಮೇಶ್ವರಿ ಶಾಲೆಯ ವಿದ್ಯಾಥರ್ಿಗಳು ಗದ್ದೆ ಬೇಸಾಯದ ಸೂಕ್ಷ್ಯತೆಗಳ ಬಗ್ಗೆ ಅರಿವನ್ನು ಪಡೆದು ಹಿರಿಯ ಕೃಷಿ ಕಾಮರ್ಿಕರೊಂದಿಗೆ ನೇಜಿ ನೆಟ್ಟು, ಆಟೋಟಗಳಲ್ಲಿ ಭಾಗವಹಿಸಿ ಸಂತಸ ಪಟ್ಟರು.
   ಈ ಸಂದರ್ಭ ಆಧುನಿಕ ಕೃಷಿ ಆಧಾರಿತ ನೇಜಿ ನೆಡುವ ಯಂತ್ರವನ್ನು ವಿದ್ಯಾಥರ್ಿಗಳಿಗೆ ಪರಿಚಯಿಸಲಾಯಿತು. ಕಾರ್ಯಕ್ರಮವನ್ನು ಶಾಲೆಯ ಹಿರಿಯ ಶಿಕ್ಷಕ ವಿಘ್ನೇಶ್ವರ ಭಟ್ ಉದ್ಘಾಟಿಸಿದರು, ಮುಖ್ಯೋಪಾಧ್ಯಾಯ ಶ್ರೀಕಾಂತ್ ವಾಟೆತ್ತಿಲ ವಿದ್ಯಾಥರ್ಿಗಳ ಗದ್ದೆ ಬೇಸಾಯದ ಬಗ್ಗೆಗಿನ ಅನುಭವವನ್ನು ಸ್ವೀಕರಿಸಿ, ಭತ್ತ ಗದ್ದೆ ಬೇಸಾಯದ ಮಹತ್ವದ ಬಗ್ಗೆ ತಿಳಿಸಿದರು. ಪಾರಂಪರಿಕ ಕೃಷಿ ಪದ್ಧತಿಯು ಇಂದು ಆಧುನಿಕತೆಗೆ ಒಗ್ಗಿಕೊಂಡಿದೆ. ಆಧುನಿಕ ಗದ್ದೆ ಬೇಸಾಯವು ಹೆಚ್ಚು ಇಳುವರಿ ಸಹಿತ ಲಾಭದಾಯಕವಾಗಿದೆ ಎಂದರು. ಅದೆ ಸಂದರ್ಭ ಪಾರಂಪರಿಕ ಕೃಷಿಯ ಜೊತೆ ಆಧುನಿಕ ಗದ್ದೆ ಬೇಸಾಯದ ಸಮನ್ವಯವಾಗಬೇಕಿದೆ ಎಂದರು.  ಗ್ರಾಮದ ಹಿರಿಯ ಕೃಷಿ ಕಾಮರ್ಿಕೆ ಮಾಣಿಕ ಓ ಬೇಲೆ ಪಾಡ್ದನಗಳ ಮೂಲಕ ನೇಜಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಸುಮಾರು 60ಕ್ಕೂ ಹೆಚ್ಚು ಮಂದಿ ವಿದ್ಯಾಥರ್ಿಗಳ ಶಿಬಿರದಲ್ಲಿ ಭಾಗವಹಿಸಿ ಭತ್ತ ಕೃಷಿಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕಾರ್ಯಕ್ರಮದಲ್ಲಿ ವಾಟೆತ್ತಿಲ ಗುವೆಲುಗದ್ದೆ ಮಾಲಕರಾದ ಸತ್ಯನಾರಾಯಣ ಮತ್ತು ಅನಂತರಾಜ ವಾಟೆತ್ತಿಲ ಸಹಕರಿಸಿದರು, ಶಿಬಿರದಲ್ಲಿ ಶಿಕ್ಷಕರಾದ ರಮಾನಂದ ಕೆದುಕೋಡಿ, ಜಯರಾಮ್ ಭಟ್, ಶ್ರೀರಾಮ ಕೆದುಕೋಡಿ, ಶ್ರೀಧರ ಮಾಸ್ತರ್ ಸೇರಿದಂತೆ ಸ್ಥಳೀಯ ಯುವ ಕರಾಡ ಸಂಘದ ಕಾರ್ಯಕರ್ತರು ಇದ್ದರು.
     ಭದ್ರಾ ಬಿತ್ತನೆ ಬೀಜ, ಯಂತ್ರದ ಮೂಲಕ ನೇಜಿ ನಾಟಿ-
  15 ದಿನಗಳ ಮುಂಚಿತವಾಗಿ ನೇಜಿ ನಾಟಿಗೆ ವಿಶೇಷವಾದ ಟ್ರೇಗಳ ಮೂಲಕ ಭದ್ರಾ ಬಿತ್ತನೆ ಬೀಜದ ನೇಜಿಯನ್ನು ತಯಾರಿಸಲಾಗಿತ್ತು. ಆಧುನಿಕ ನಾಟಿ ಯಂತ್ರಕ್ಕೆ ಪೂರಕವಾಗುವಂತೆ ಬೆಳೆದ ನೇಜಿಯನ್ನು ಟ್ರಾಕ್ಟರ್ ಟ್ರಾಲಿಯಲ್ಲಿ ಅಳವಡಿಸಿ ಆಧುನಿಕ ರೀತಿಯಲ್ಲಿ ನಾಟಿ ಮಾಡಲಾಯಿತು. ಕೊಮ್ಮುಂಜೆ ಖುಷಿಕೇಶ್ ಭಟ್ ಸಂಗಡಿಗರು ಯಂತ್ರದ ಮೂಲಕ ನೇಜಿ ನಾಟಿ ಮಾಡಲು ಸಹಕರಿಸಿದರು. ಭತ್ತ ಕೃಷಿ ಕೇಂದ್ರ ಪ್ರದೇಶಗಳಾದ ಬಾಯಾರು, ವಿಟ್ಲ, ಮಾಣಿಲ, ಪೈವಳಿಕೆ ಸೇರಿದಂತೆ ಸಮೀಪತರ್ಿ ಪ್ರದೇಶಗಳಲ್ಲಿ ಆಧುನಿಕ ಕೃಷಿ ಯಂತ್ರಗಳು ರೈತರಿಗೆ ವರದಾನವಾಗಿವೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries