HEALTH TIPS

No title

                     ದಿಗ್ವಿಜಯ ರಥಯಾತ್ರೆಗೆ ಕುಂಬಳೆ ಹಾಗೂ ಮಂಜೇಶ್ವರದಲ್ಲಿ  ಭವ್ಯ ಸ್ವಾಗತ
   ಕುಂಬಳೆ: ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಕನರ್ಾಟಕ ಇವರ ಆಶ್ರಯದಲ್ಲಿ ಚಿಕಾಗೋ ಐತಿಹಾಸಿಕ ಭಾಷಣದ 125ನೇ ಸವಿ ನಿನೆಪಿಗಾಗಿ ಹಾಗೂ ಸ್ವಾಮಿ ವಿವೇಕಾನಂದರ ಮಾನಸಪುತ್ರಿ, ಭಾರತ ಮಾತೆಗೆ ಜೀವನವನ್ನೇ ಸಮಪರ್ಿಸಿದ್ದ ಪುಷ್ಪ ಸಹೋದರಿ ನಿವೇದಿತಾ ಅವರ 150ನೇ ಜನ್ಮ ದಿನದ ಸ್ಮರಣೆಗಾಗಿ ಜಿಲ್ಲೆಯಲ್ಲಿ ಸಂಚರಿಸಲಿರುವ ದಿಗ್ವಿಜಯ ರಥಯಾತ್ರೆಗೆ ಗುರುವಾರ ಕುಂಬಳೆಯಲ್ಲಿ ಭವ್ಯ ಸ್ವಾಗತವನ್ನು ನೀಡಲಾಯಿತು.
   ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಯುವ ಬ್ರಿಗೇಡಿನ ಕಾರ್ಯಕರ್ತ ಪಂಚಾಕ್ಷರಿ ಬೆಂಗಳೂರು ಅವರು ದಿಗ್ವಿಜಯ ರಥಯಾತ್ರೆಯ ಮಹತ್ವ ಮತ್ತು ಉದ್ದೇಶವನ್ನು ತಿಳಿಸಿದರು. 
   ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಸುಧಾಕರ ಕಾಮತ್,  ರಮೇಶ್ ಭಟ್, ಸುಜಿತ್ ರೈ, ಹರೀಶ್ ಗಟ್ಟಿ, ಹಿಂದೂ ಐಕ್ಯ ವೇದಿಯ ಸಂದೀಪ್ ಗಟ್ಟಿ, ಮಧುಸೂದನ್ ಕಾಮತ್, ರಾಮು, ಕುಂಬಳೆಯ ಆಟೋ ಚಾಲಕರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ರಥದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ವಿವೇಕಾನಂದರ ಪ್ರತಿಮೆಗೆ ಹಾರಾರ್ಪಣೆ ಗೈದರು.  ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ಅಡಿಗ ಅವರು ಪ್ರತಿಮೆಗಳಿಗೆ ಆರತಿ ಮಾಡಿ ಬೀಳ್ಕೊಟ್ಟರು.  ದಯಾನಂದ  ರಾವ್ ಸ್ವಾಗತಿಸಿ, ಮಹೇಶ್ ಪುಣಿಯೂರು ವಂದಿಸಿದರು.
         
    ಮಂಜೇಶ್ವರ: ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆಯುತ್ತಿರುವ ಚಿಕಾಗೋ ಭಾಷಣದ  150ನೇ ಜನ್ಮವರ್ಷ ಪ್ರಯುಕ್ತ  ಯುವ ಬ್ರಿಗೇಡ್ ಹಮ್ಮಿಕೊಂಡಿದ್ದ ರಥ ಯಾತ್ರೆ ಬುಧವಾರ ಕೇರಳ ಪ್ರವೇಶಿಸಿದಾಗ ಭಾಷಾ ಸಂಗಮ ಭೂಮಿ ಮಂಜೇಶ್ವರ ಹೊಸಂಗಡಿಯಲ್ಲಿ ಯುವ ನೇತಾರ ಆದರ್ಶ ಬಿಎಂ. ನೇತೃತ್ವದಲ್ಲಿ ಸ್ವಾಗತಿಸಲಾಯಿತು.
    ಹಿಂದೂ ಸಂಘಟನೆಗಳ ಪ್ರಮುಖರಾದ ಪದ್ಮನಾಭ್ ಕಡಪರ, ಹರಿಶ್ಚಂದ್ರ ಎಂ. ತುಳಸಿದಾಸ್, ಭರತ್, ಭಾಸ್ಕರ ಬಿಎಂ, ಗಿರಿಜಾ, ಚಂಚಲಾಕ್ಷಿ, ರುದ್ರಪ್ಪ ಮೇಸ್ತ್ರಿ, ಚಂದ್ರ ಪೇಲಪಾಡಿ, ಕೃಷ್ಣ ಎಂ ನೇತೃತ್ವ ನೀಡಿದರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries