HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಇಂದು ಪುತ್ತೂರಿನಲ್ಲಿ ಸಾಹಿತ್ಯ ಸಂಭ್ರಮ
   ಪುತ್ತೂರು: ಪುತ್ತೂರು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಇಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಪುತ್ತೂರು ರಾಧಾಕೃಷ್ಣ ಮಂದಿರ ರಸ್ತೆಯಲ್ಲಿರುವ ಅನುರಾಗ ವಠಾರದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
   ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಸಹಿತ ವಿವಿಧೆಡೆಗಳ ಕನ್ನಡ-ತುಳು ಭಾಷೆಗಳ ಸಾಹಿತ್ಯ ಸಂಭ್ರಮದಲ್ಲಿ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಡಾ. ಶಶಿಕಾಂತ ಮಣಿ ಸ್ವಾಮೀಜಿ ಉದ್ಘಾಟಿಸುವರು. ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ ಕೆ.ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಪ್ರಾಸ್ತಾವಿಕವಾಗಿ ಮಾತನಾಡುವರು. ಸಾಹಿತಿಗಳಾದ ಪುರಂದರ ಭಟ್, ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ.ವಿ.ಬಿ.ಅತರ್ಿಕಜೆ, ತಾರಾನಾಥ ಬೋಳಾರ್, ಪತ್ರಿಕೋದ್ಯಮಿ ಎಸ್.ಆರ್.ಬಂಡಿಮಾರ್, ಮಹೇಂದ್ರನಾಥ ಸಾಲೆತ್ತೂರು, ಎ.ಎ.ನಾರಾಯಣ, ಪುತ್ತೂರು ಸಾಹಿತ್ಯ ಪರಿಷತ್ತು ಅಧ್ಯಕ್ಷ ಐತ್ತಪ್ಪ ನಾಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
   ಜಿಲ್ಲೆಯ ಕವಿಗಳಾದ ಹರೀಶ್ ಪೆರ್ಲ, ಜಯ ಮಣಿಯಂಪಾರೆ, ಚೇತನಾ ಕುಂಬಳೆ, ಮೌನೇಶ್ ಆಚಾರ್ಯ ಕಡಂಬಾರ್, ಕುಶಾಲಾಕ್ಷಿ ವಿ.ಕುಲಾಲ್, ದಯಾನಂದ ರೈ ಕಳ್ವಾಜೆ, ಡಾ.ಶಂಕರನಾರಾಯಣ ಭಟ್ ಪೆರ್ಲ, ವಿರಾಜ್ ಅಡೂರು, ಮಣಿರಾಜ್ ವಾಂತಿಚ್ಚಾಲ್, ಸನ್ನಿಧಿ ಟಿ. ರೈ ಪೆರ್ಲ, ಅಕ್ಷತಾ ರಾಜ್ ಪೆರ್ಲ, ಶ್ಯಾಮಲಾ ರವಿರಾಜ್ ಕುಂಬಳೆ, ಸುಭಾಶ್ ಪೆರ್ಲ, ಜ್ಯೋಸ್ನ್ಸಾ ಕಡಂದೇಲು, ಶ್ರೀನಿವಾಸ ಆಳ್ವ ಕಳತ್ತೂರು, ಹರೀಶ್ ಸುಲಾಯ ಒಡ್ಡಂಬೆಟ್ಟು, ಗುಣಾಜೆ ರಾಮಚಂದ್ರ ಭಟ್, ನಾರಾಯಣ ಭಟ್ ಹಿಳ್ಳೆಮನೆ,ಚಿನ್ಮಯಕೃಷ್ಣ ಕಡಂದೇಲು, ಪ್ರಭಾವತಿ ಕೆದಿಲಾಯ ಪುಂಡೂರು, ಶ್ವೇತಾ ಕಜೆ, ಶಶಿಕಲಾ ಕುಂಬಳೆ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸುವರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries