ಇಂದು ಕನ್ನಡ ಭಾಷಾ ಸಂರಕ್ಷಣಾ ದಿನಾಚರಣೆ
ಕಾಸರಗೋಡು: ಇಂದು ಗಡಿನಾಡಿನ ಕನ್ನಡಿಗರು ಕನ್ನಡ ಭಾಷಾ ಸಂರಕ್ಷಣಾ ದಿನಾಚರಣೆ ನಡೆಸಬೇಕೆಂದು ಕನ್ನಡ ಹೋರಾಟ ಸಮಿತಿ ಕರೆ ನೀಡಿದ್ದು, ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಕರಂದಕ್ಕಾಡ್ ಜಂಕ್ಷನ್ ನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ.
ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಸಂರಕ್ಷಿಸಬೇಕಾಗಿರುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಆದರೆ ಕಾಸರಗೋಡನ್ನು ರಾಜ್ಯವನ್ನು ಆಳಿದ ಸರಕಾರಗಳು ಕನ್ನಡಿಗರನ್ನು ಅಲಕ್ಷಿಸಿ,ಮಲತಾಯಿ ಧೋರಣೆಯನ್ನು ತೋರ್ಪಡಿಸುತ್ತಿದೆ. ಇದರಿಂದ ಗಡಿನಾಡ ಕನ್ನಡಿಗರ ಸಾಂವಿಧಾನಿಕ ಹಕ್ಕಿಗೆ ಧಕ್ಕೆಯಾಗಿದೆ. ಇದರಿಂದ ಇಲ್ಲಿಯ ಕನ್ನಡಿಗರು ನಿತ್ಯ ಸಂಕಷ್ಟ-ಸವಾಲುಗಳನ್ನು ಎದುರಿಸುತ್ತಿದೆ ಎಂದು ಕನ್ನಡ ಹೋರಾಟ ಸಮಿತಿ ಆರೋಪಿಸಿದೆ.
ಇಂದು ಆಯೋಜನೆಗೊಂಡಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಪಾಲ್ಗೊಳ್ಳಬೇಕೆಂದು ಸಮಿತಿ ವಿನಂತಿಸಿದೆ.
ಕಾಸರಗೋಡು: ಇಂದು ಗಡಿನಾಡಿನ ಕನ್ನಡಿಗರು ಕನ್ನಡ ಭಾಷಾ ಸಂರಕ್ಷಣಾ ದಿನಾಚರಣೆ ನಡೆಸಬೇಕೆಂದು ಕನ್ನಡ ಹೋರಾಟ ಸಮಿತಿ ಕರೆ ನೀಡಿದ್ದು, ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಕರಂದಕ್ಕಾಡ್ ಜಂಕ್ಷನ್ ನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ.
ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಸಂರಕ್ಷಿಸಬೇಕಾಗಿರುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಆದರೆ ಕಾಸರಗೋಡನ್ನು ರಾಜ್ಯವನ್ನು ಆಳಿದ ಸರಕಾರಗಳು ಕನ್ನಡಿಗರನ್ನು ಅಲಕ್ಷಿಸಿ,ಮಲತಾಯಿ ಧೋರಣೆಯನ್ನು ತೋರ್ಪಡಿಸುತ್ತಿದೆ. ಇದರಿಂದ ಗಡಿನಾಡ ಕನ್ನಡಿಗರ ಸಾಂವಿಧಾನಿಕ ಹಕ್ಕಿಗೆ ಧಕ್ಕೆಯಾಗಿದೆ. ಇದರಿಂದ ಇಲ್ಲಿಯ ಕನ್ನಡಿಗರು ನಿತ್ಯ ಸಂಕಷ್ಟ-ಸವಾಲುಗಳನ್ನು ಎದುರಿಸುತ್ತಿದೆ ಎಂದು ಕನ್ನಡ ಹೋರಾಟ ಸಮಿತಿ ಆರೋಪಿಸಿದೆ.
ಇಂದು ಆಯೋಜನೆಗೊಂಡಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಪಾಲ್ಗೊಳ್ಳಬೇಕೆಂದು ಸಮಿತಿ ವಿನಂತಿಸಿದೆ.