HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಇಂದು ಸ್ನೇಹಾಂಜಲಿ 2018
   ಮಂಜೇಶ್ವರ: ರಿದಮ್ ಕಲ್ಚರಲ್ ವಿಂಗ್ಸರಸು ಡ್ಯಾನ್ಸ್ ಕಂಪೆನಿ ಮತ್ತು ಕಲಾಸ್ಪರ್ಶಂ ಮಂಜೇಶ್ವರ ಇದರಸಹಯೋಗದಲ್ಲಿ ವಿಶೇಷಸಂಗೀತ-ನೃತ್ಯ ಕಲರವ ಸ್ನೇಹಾಂಜಲಿ ಇಂದು ಅಪರಾಹ್ನ 3 ರಿಂದ ಮಂಜೇಶ್ವರ ಗಿಳಿವಿಂಡು ಸ್ಮಾರಕ ಸಮೀಪದ ಕಲಾಸ್ಪರ್ಶಂ ಅಡಿಟೋರಿಯಂ ನಲ್ಲಿ ನಡೆಯಲಿದೆ.
   ಸಮಾರಂಭದಂಗವಾಗಿ 3 ಕ್ಕೆಕರೋಕೆ ಚಿತ್ರಗೀತೆ ಸ್ಪಧರ್ೆಗೆ ಸ್ನೇಹಾಲಯದ ಗೌರವಾಧ್ಯಕ್ಷೆ ಜೀನ್ ಲವೀನಾ ಮೊಂತೇರೋ  ಚಾಲನೆ ನೀಡುವರು. ಸಂಜೆ 6 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಉದ್ಯಾವರ ಮಾಡ ಕ್ಷೇತ್ರದ ಪಾತ್ರಿ ರಾಜಾ ಬೆಳ್ಚಡ ದೀ ಬೆಳಗಿಸುವರು. ಬ್ಲಾ. ಪಂ. ಅಧ್ಯಕ್ಷ ಎಕೆಎಂ ಅಶ್ರಫ್ ಉದ್ಘಾಟಿಸುವರು. ಕಾರ್ಯಕ್ರಮ ನಿದರ್ೇಶಕ ಸಿದ್ದೀಕ್ ಮಂಜೇಶ್ವರ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ, ಉದ್ಯಮಿ ಗಣೇಶ್ ಬಜಾಲ್, ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್, ಪೋಲೀಸ್ ಠಾಣಾಧಿಕಾರಿ ಸಜಿ, ಬ್ಲಾ.ಪಂ. ಸದಸ್ಯ ಕೆ.ಆರ್.ಜಯಾನಂದ, ಚಲನಚಿತ್ರ ನಿದರ್ೇಶಕಿ ಲಲಿತಾಶ್ರೀ, ಕಲಾವಿದ ಯತೀಶ್ ಪೂಜಾರಿ, ತುಳು ಅಕಾಡೆಮಿ ಸದಸ್ಯ ವಿಶ್ವನಾಥ್ ಕುದುರು, ವಕೀಲ ನವೀನ್ ರಾಜ್ ಕೆ.ಜೆ, ಎಚ್ ಐ ಖಾಲಿದ್, ಚಿತ್ರನಟಿ ಶಾಂತಿ, ಇಷರ್ಾದ್ ಮಂಜೇಶ್ವರ, ಸಚಿತಾ ರೈ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸುವರು. ವೇದಿಕೆಯಲ್ಲಿ ಸಾಂಸ್ಕೃತಿಕ, ಸಾಹಿತ್ತಿಕ ಸಾಧಕರನ್ನು ಗೌರವಿಸಲಾಗುವುದು. ಬಳಿಕ ನೃತ್ಯ ಸ್ಪಧರ್ೆ, ರಾತ್ರಿ 9 ರಿಂದ ಸ್ನೇಹಾಲಯ ಮ್ಯೂಸಿಕಲ್ ನೈಟ್ , ಬಹುಮಾನ ವಿತರಣೆಗಳು ನಡೆಯಲಿವೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries