HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಉದ್ಯಮ ವಲಯಕ್ಕೂ ಕಾಲಿಟ್ಟ ಮೀ ಟೂ: ಜಾಹೀರಾತು ಸಂಸ್ಥೆಗಳ ಉನ್ನತಾಧಿಕಾರಿಗಳು ರಾಜೀನಾಮೆ
    ಬೆಂಗಳೂರು: ಮಿ ಟೂ ಚಳವಳಿ ಹೆಚ್ಚು ಸದ್ದು ಮಾಡುತ್ತಿದೆ. ಸಿನಿಮಾ, ರಾಜಕೀಯ ಕ್ಷೇತ್ರದ ಕೆಲವು ಗಣ್ಯರ ವಿರುದ್ಧ ಕೇಳಿಬಂದಿದ್ದ ಆರೋಪ ಇದೀಗ ಉದ್ಯಮ ವಲಯಕ್ಕೆ ಕಾಲಿಟ್ಟಿದೆ.
    ಲೈಂಗಿಕ ಕಿರುಕುಳ ಆರೋಪ ಹಿನ್ನಲೆಯಲ್ಲಿ ನಗರದ ಜಾಹೀರಾತು ಸಂಸ್ಥೆಯಾದ ಹ್ಯಾಪಿ ಮ್ಯಾಕ್ಗರ್ರಿ ಬೊವೆನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾತರ್ಿಕ್ ಅಯ್ಯರ್, ವ್ಯವಸ್ಥಾಪಕ ನಿದರ್ೇಶಕ ಪ್ರವೀಣ್ ದಾಸ್, ಹಿರಿಯ ಕ್ರಿಯಾಶೀಲ ನಿದರ್ೇಶಕ ಬೋಧಿಸತ್ವ ದಾಸಗುಪ್ತ ಮತ್ತು ಐಪ್ರಾಸ್ಪೆಕ್ಟ್ ಇಂಡಿಯಾ ನ್ಯಾಶನಲ್ ಕ್ರಿಯೇಟಿವ್ ನಿದರ್ೇಶಕ ದಿನೇಶ್ ಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
    ಕಳೆದ ಅಕ್ಟೋಬರ್ 10ರಂದು ಹ್ಯಾಪಿ ಕ್ರಿಯೇಟಿವ್ ನ ಸಂಗತಿಗಳನ್ನು ಪತ್ರಕತರ್ೆ ಸಂಧ್ಯಾ ಮೆನನ್ ಟ್ವೀಟ್ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಕಚೇರಿಯ ಮಹಿಳಾ ಸಿಬ್ಬಂದಿ ಬಗ್ಗೆ ಮೇಲಾಧಿಕಾರಿಗಳು ಅನುಚಿತವಾಗಿ ನಡೆದುಕೊಳ್ಳುತ್ತಾರೆ, ಕೇವಲವಾಗಿ ಮಾತನಾಡುತ್ತಾರೆ ಮತ್ತು ಕಚೇರಿಯ ಪಾಟರ್ಿಗಳಲ್ಲಿ ಮಹಿಳೆಯರಿಗೆ ಅಸುರಕ್ಷಿತ ವಾತಾವರಣವಿದೆ ಎಂದು ಟ್ವೀಟ್ ಮಾಡಿದ್ದರು.
  ಟೆಂಟ್ಸು ಕಂಪೆನಿಯ ಐಪ್ರೊಸ್ಪೆಕ್ಟ್ ನಿಂದ ಬಂದ ದಿನೇಶ್ ಸ್ವಾಮಿ ಮಹಿಳಾ ನೌಕರರ ಮೇಲೆ ಲೈಂಗಿಕತೆಗೆ ಸಂಬಂಧಪಟ್ಟ ಜೋಕ್ಸ್ ಗಳನ್ನು ಕೂಡ ಮಾಡುತ್ತಿದ್ದರು ಎಂದು ಸಂಧ್ಯಾ ಮೆನನ್ ಟ್ವೀಟ್ ನಲ್ಲಿ ಬಹಿರಂಗಪಡಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries