ಇನ್ನು ಮುಂದೆ ನಿಮ್ಮ ಮನೆ ಬಾಗಿಲಲ್ಲಿಯೇ ಸಿಗಲಿದೆ ಇ-ಮುದ್ರಾಂಕ ವ್ಯವಸ್ಥೆ
ದೆಹಲಿ: ಇನ್ನು ಮುಂದೆ ಇ-ಸ್ಟಾಂಪ್(ಮುದ್ರಾಂಕ) ಗೆ ಸಂಬಂಧಪಟ್ಟ ಅಧಿಕೃತ ಕೇಂದ್ರಕ್ಕೆ ಹೋಗಬೇಕಾಗಿಲ್ಲ. ಯಾರು ಎಲ್ಲಿ ಯಾವಾಗ ಬೇಕಾದರೂ ಪಡೆಯಬಹುದಾಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆ ಈ ಸಂಬಂಧ ನೂತನ ವ್ಯವಸ್ಥೆ ಆರಂಭವಾಗಲಿದೆ ಎಂದು ಹೇಳಿದೆ.
ಹೊಸ ವ್ಯವಸ್ಥೆಯಡಿ, ಯಾರು ಎಲ್ಲಿ ಬೇಕಾದರೂ ಇ-ಸ್ಟಾಂಪ್ ಗಳನ್ನು ಭತರ್ಿ ಮಾಡಿ ಅದರ ಮುದ್ರಣವನ್ನು ಪಡೆಯಬಹುದು. ನಂತರ ಅದನ್ನು ನೋಟರಿಯಿಂದ ದೃಢೀಕರಣ ಮಾಡಿಕೊಳ್ಳಬೇಕು.
ಮುದ್ರಾಂಕ ಆಯುಕ್ತ ಮತ್ತು ದಾಖಲಾತಿ ಕೇಂದ್ರದ ಇನ್ಸ್ ಪೆಕ್ಟರ್ ಜನರಲ್ ಡಾ ಕೆ ವಿ ತ್ರಿಲೋಕ್ ಚಂದ್ರ, ಸ್ಟಾಕ್ ಹೋಲ್ಡಿಂಗ್ಸ್ ಕಾಪರ್ೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ಅಧಿಕೃತ ಸುಮಾರು 3,500 ಕೇಂದ್ರಗಳಿವೆ. ಮಾರಾಟ ಒಪ್ಪಂದ, ಬಾಡಿಗೆ ಒಪ್ಪಂದ, ಕಚೇರಿಗಳಲ್ಲಿ ಮಾಲೀಕರು ಮತ್ತು ನೌಕರರ ಒಪ್ಪಂದ ಪತ್ರಗಳು ಇತ್ಯಾದಿಗಳಿಗೆ ನೋಂದಣಿ ಮತ್ತು ಮುದ್ರಾಂಕಗಳಿಗೆ ಈ ಕೇಂದ್ರಗಳಿಂದ ಮುದ್ರಾಂಕ ಪತ್ರಗಳನ್ನು ಪಡೆದುಕೊಂಡು ಭತರ್ಿ ಮಾಡಿ ನಂತರ ನೋಟರಿಯಿಂದ ಪ್ರಮಾಣ ಮಾಡಿಸಿಕೊಳ್ಳಬೇಕು. ಹೊಸ ವ್ಯವಸ್ಥೆ ಜಾರಿಗೆ ಬಂದ ಮೇಲೆ ಇ-ಸ್ಟಾಂಪ್ ಕಾಗದವನ್ನು ಎಲ್ಲಿ ಯಾವಾಗ ಬೇಕಾದರೂ ಭತರ್ಿ ಮಾಡಬಹುದು ಎಂದರು.
ಒಪ್ಪಂದ ಒಂದು ಬಾರಿ ಕಾಗದದಲ್ಲಿ ಭತರ್ಿ ಮಾಡಿದ ನಂತರ ಇ-ಮುದ್ರಾಂಕವನ್ನು ಕೇವಲ ಒಂದು ಬಾರಿ ಮಾತ್ರ ಮುದ್ರಣ ಮಾಡಿಕೊಳ್ಳಬಹುದು. ನಕಲಿ ಮಾಡುವುದು ಅಥವಾ ಮೋಸ ಮಾಡುವುದನ್ನು ತಪ್ಪಿಸಲು ಈ ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ತ್ರಿಲೋಕ್ ಚಂದ್ರ ಹೇಳಿದರು.
ಈ ಪ್ರಕ್ರಿಯೆಗೆ ನಗದನ್ನು ಸಹ ನೆಟ್ ಬ್ಯಾಂಕಿಂಗ್ ಮೂಲಕ ಮಾಡಿಕೊಳ್ಳಬಹುದಾಗಿದೆ. ಮುದ್ರಾಂಕ ಕಾಗದದಲ್ಲಿ ಭತರ್ಿ ಮಾಡಿದ ನಂತರ ಅದರ ಶುಲ್ಕವನ್ನು ತೋರಿಸುತ್ತದೆ. ಆನ್ ಲೈನ್ ನಲ್ಲಿಯೇ ಹಣ ಪಾವತಿಸಬಹುದು. ಸೇವಾ ಶುಲ್ಕ ಜಾರಿಗೆ ತರುವ ಪ್ರಸ್ತಾಪವಿದೆ, ಆದರೆ ನಾವು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದರು.
ದೆಹಲಿ: ಇನ್ನು ಮುಂದೆ ಇ-ಸ್ಟಾಂಪ್(ಮುದ್ರಾಂಕ) ಗೆ ಸಂಬಂಧಪಟ್ಟ ಅಧಿಕೃತ ಕೇಂದ್ರಕ್ಕೆ ಹೋಗಬೇಕಾಗಿಲ್ಲ. ಯಾರು ಎಲ್ಲಿ ಯಾವಾಗ ಬೇಕಾದರೂ ಪಡೆಯಬಹುದಾಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆ ಈ ಸಂಬಂಧ ನೂತನ ವ್ಯವಸ್ಥೆ ಆರಂಭವಾಗಲಿದೆ ಎಂದು ಹೇಳಿದೆ.
ಹೊಸ ವ್ಯವಸ್ಥೆಯಡಿ, ಯಾರು ಎಲ್ಲಿ ಬೇಕಾದರೂ ಇ-ಸ್ಟಾಂಪ್ ಗಳನ್ನು ಭತರ್ಿ ಮಾಡಿ ಅದರ ಮುದ್ರಣವನ್ನು ಪಡೆಯಬಹುದು. ನಂತರ ಅದನ್ನು ನೋಟರಿಯಿಂದ ದೃಢೀಕರಣ ಮಾಡಿಕೊಳ್ಳಬೇಕು.
ಮುದ್ರಾಂಕ ಆಯುಕ್ತ ಮತ್ತು ದಾಖಲಾತಿ ಕೇಂದ್ರದ ಇನ್ಸ್ ಪೆಕ್ಟರ್ ಜನರಲ್ ಡಾ ಕೆ ವಿ ತ್ರಿಲೋಕ್ ಚಂದ್ರ, ಸ್ಟಾಕ್ ಹೋಲ್ಡಿಂಗ್ಸ್ ಕಾಪರ್ೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ಅಧಿಕೃತ ಸುಮಾರು 3,500 ಕೇಂದ್ರಗಳಿವೆ. ಮಾರಾಟ ಒಪ್ಪಂದ, ಬಾಡಿಗೆ ಒಪ್ಪಂದ, ಕಚೇರಿಗಳಲ್ಲಿ ಮಾಲೀಕರು ಮತ್ತು ನೌಕರರ ಒಪ್ಪಂದ ಪತ್ರಗಳು ಇತ್ಯಾದಿಗಳಿಗೆ ನೋಂದಣಿ ಮತ್ತು ಮುದ್ರಾಂಕಗಳಿಗೆ ಈ ಕೇಂದ್ರಗಳಿಂದ ಮುದ್ರಾಂಕ ಪತ್ರಗಳನ್ನು ಪಡೆದುಕೊಂಡು ಭತರ್ಿ ಮಾಡಿ ನಂತರ ನೋಟರಿಯಿಂದ ಪ್ರಮಾಣ ಮಾಡಿಸಿಕೊಳ್ಳಬೇಕು. ಹೊಸ ವ್ಯವಸ್ಥೆ ಜಾರಿಗೆ ಬಂದ ಮೇಲೆ ಇ-ಸ್ಟಾಂಪ್ ಕಾಗದವನ್ನು ಎಲ್ಲಿ ಯಾವಾಗ ಬೇಕಾದರೂ ಭತರ್ಿ ಮಾಡಬಹುದು ಎಂದರು.
ಒಪ್ಪಂದ ಒಂದು ಬಾರಿ ಕಾಗದದಲ್ಲಿ ಭತರ್ಿ ಮಾಡಿದ ನಂತರ ಇ-ಮುದ್ರಾಂಕವನ್ನು ಕೇವಲ ಒಂದು ಬಾರಿ ಮಾತ್ರ ಮುದ್ರಣ ಮಾಡಿಕೊಳ್ಳಬಹುದು. ನಕಲಿ ಮಾಡುವುದು ಅಥವಾ ಮೋಸ ಮಾಡುವುದನ್ನು ತಪ್ಪಿಸಲು ಈ ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ತ್ರಿಲೋಕ್ ಚಂದ್ರ ಹೇಳಿದರು.
ಈ ಪ್ರಕ್ರಿಯೆಗೆ ನಗದನ್ನು ಸಹ ನೆಟ್ ಬ್ಯಾಂಕಿಂಗ್ ಮೂಲಕ ಮಾಡಿಕೊಳ್ಳಬಹುದಾಗಿದೆ. ಮುದ್ರಾಂಕ ಕಾಗದದಲ್ಲಿ ಭತರ್ಿ ಮಾಡಿದ ನಂತರ ಅದರ ಶುಲ್ಕವನ್ನು ತೋರಿಸುತ್ತದೆ. ಆನ್ ಲೈನ್ ನಲ್ಲಿಯೇ ಹಣ ಪಾವತಿಸಬಹುದು. ಸೇವಾ ಶುಲ್ಕ ಜಾರಿಗೆ ತರುವ ಪ್ರಸ್ತಾಪವಿದೆ, ಆದರೆ ನಾವು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದರು.


