HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಅಬ್ದುಲ್ ರಜಾಕ್ ನಿಷ್ಕಳಂಕ ನಿಸ್ವಾರ್ಥ ರಾಜಕಾರಣಿ: ಎಕೆಎಂ ಅಶ್ರಫ್
                            ಪೆರ್ಲದಲ್ಲಿ ಅಬ್ದುಲ್ ರಜಾಕ್ ಸರ್ವ ಪಕ್ಷ ಸಂತಾಪ ಸಭೆ
   ಪೆರ್ಲ:ವ್ಯಕ್ತಿ ಜೀವನ ಹಾಗೂ ಸಾಮಾಜಿಕ ಬದುಕಿನಲ್ಲಿ ನಿಷ್ಕಳಂಕ ಹಾಗೂ ನಿಸ್ವಾರ್ಥರಾಗಿ ಶಾಸಕ ಪದವಿಯ ಮಹತ್ವವನ್ನು ಎತ್ತಿಹಿಡಿದ ಪಿ.ಬಿ. ಅಬ್ದುಲ್ ರಜಾಕ್ ಅವರ ನಿಧನ ತುಂಬಲಾರದ ನಷ್ಟ ಎಂದು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎ.ಕೆ.ಎಮ್. ಅಶ್ರಫ್ ಹೇಳಿದರು.
    ಇತ್ತೀಚೆಗೆ ಅಗಲಿದ ಮಂಜೇಶ್ವರದ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಅವರ  ನಿಧನಕ್ಕೆ ಸಂತಾಪ ಸೂಚಕವಾಗಿ ಪೆರ್ಲದಲ್ಲಿ ಸೋಮವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಅವರು ಮಾತನಾಡಿದರು.
  ಸ್ವಪ್ರಯತ್ನದಿಂದ ರಾಜಕೀಯ ಎತ್ತರಕ್ಕೆ ಬೆಳೆದ ಪಿ.ಬಿ. ಯವರು ಜನಸಾಮಾನ್ಯರೊಂದಿಗೆ ಬೆರೆತು ಬದುಕಿದ ರಾಜಕಾರಣಿ.ದೀನ ದುರ್ಬಲರ ಅಶಾಕಿರಣವಾಗಿದ್ದ ಶಾಸಕರು ತನ್ನ ಸೇವಾವಧಿಯಲ್ಲಿ ಲಭಿಸಿದ ವೇತನವನ್ನು ಬಡರೋಗಿಗಳಿಗೆ ನೀಡಿದ ಜನಪರ ಶಾಸಕ. ಗೆಲುವು ತಂದುಕೊಟ್ಟ ಜನರಿಗೂ, ನಾಡಿಗೂ ಋಣಿಯಾಗಿ ಸಮಾಜಕ್ಕಾಗಿ ಬದುಕನ್ನು ಮುಡಿಪಾಗಿಟ್ಟ ಅಬ್ದುಲ್ ರಜಾಕ್ ಅವರ ಬದುಕು ನಮಗೆಲ್ಲಾ ಮಾದರಿ ಎಂದರು.
   ಯುಡಿಎಫ್ ಪಂಚಾಯತಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದಶರ್ಿ ಸೋಮಶೇಖರ ಜೆ.ಎಸ್., ಪಂಚಾಯಿತಿ ಅಧ್ಯಕ್ಷೆ ಶಾರದ ವೈ., ಉಪಾಧ್ಯಕ್ಷ ಸಿದ್ದೀಕ್ ಹಾಜಿ ಖಂಡಿಗೆ ವಿವಿಧ ಪಕ್ಷಗಳ ನೇತಾರರಾದ ಶಂಕರ ರೈ ಮಾಸ್ಟರ್, ಟಿ. ಪ್ರಸಾದ್ ಪೆರ್ಲ, ನರಸಿಂಹ ಪೂಜಾರಿ, ಸುಬ್ಬಣ್ಣ ಅಳ್ವ, ವ್ಯಾಪಾರಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಮಾನ್ ಪೆರ್ಲ, ಮಿತ್ತೂರು ಪುರುಷೋತ್ತಮ ಭಟ್, ರವೀಂದ್ರನಾಥ ನಾಯಕ್ ಶೇಣಿ, ರಾಮಕೃಷ್ಣ ರೈ ಕುದ್ವ, ವಿನೋದ್ ಅಮೆಕ್ಕಳ, ನ್ಯಾಯವಾದಿ ಚಂದ್ರಮೋಹನ್ ಕಾಟುಕುಕ್ಕೆ, ಸಿದ್ದೀಕ್ ವಳಮೊಗರ್, ಶರೀಫ್ ಎ.ಕೆ., ಅಶ್ರಫ್ ಮತ್ರ್ಯ, ಅಯಿಶಾ ಎ. ಎ. ಮತ್ತಿತರರು ಶ್ರದ್ದಾಂಜಲಿ ಅಪರ್ಿಸಿ ಮಾತನಾಡಿದರು. ಪಂಚಾಯಿತಿ ಜನ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದರು.ಅಬೂಬಕ್ಕರ್ ಪೆರ್ದನೆ ಸ್ವಾಗತಿಸಿ, ಹಮೀದ್ ಅಲಿ ಕಂದಲ್ ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries