HEALTH TIPS

ಕಾಳುಮೆಣಸಿನ ರೋಗಬಾಧೆ ನಿವಾರಣೆಗೆ ಔಷಧ ಸಿಂಪಡಣೆಗೆ ಕ್ರಮ



             ಕಾಸರಗೋಡು:  ಜಿಲ್ಲೆಯಲ್ಲಿ ಕಾಳುಮೆಣಸಿಗೆ ಬಾಧೆ ನೀಡುವ ರೋಗನಿವಾರಣೆಗೆ ಕೀಟನಾಶಕವನ್ನು ಹೋಲುವ ಮತ್ತು ಉತ್ತಮ ಬೆಳವಣಿಗೆಗೆ ಪೂರಕವಾದ ಅಕೋಮಿನ್ ಸಿಂಡಣೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 1.21 ಕೋಟಿ ರೂ. ಮಂಜೂರುಮಾಡಿದೆ. ಜಲಪ್ರಳಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾಳುಮೆಣಸಿನ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. 118.6 ಮೆಟ್ರಿಕ್ ಟನ್ ಕಾಳುಮೆಣಸು ಅತಿವೃಷ್ಟಿಗೆ ಹಾನಿಗೊಂಡಿದೆ. ಮೂಲಕ 474.4 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.


      ಜಿಲ್ಲೆಯ 6 ಬ್ಲೋಕ್ ಗಳಲ್ಲೂ ಉಚಿತ ರೂಪದಲ್ಲಿ ಔಷಧ ವಿತರಣೆ ನಡೆಯಲಿದೆ. ಆಯಾ ಪಂಚಾಯತ್ನಲ್ಲಿ ದ್ರವ ಔಷಧ ಸಿಂಡಣೆಗೆ ಸಂಬಂಧಿತ ಚಟುವಟಿಕೆಗಳ ಕುರಿತು ಸ್ಥಳೀಯ ಕೃಷಿಅಧಿಕಾರಿಗೆ ಹೊಣೆನೀಡಲಾಗಿದೆ. ಪನಿಯೂರು ಒಂದು, ಕರಿಯಿಲಾಂಜಿ, ಕರಿಮುಂಡ ಎಂಬ ವರ್ಗದ ಕಾಳುಮೆಣಸು ಪ್ರಧಾನವಾಗಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಇವುಗಳನ್ನು ಬಾಧಿಸುವ ಎಲ್ಲ ರೀತಿಯ ರೋಗಗಳಿಗೆ ಅಕೋಮಿನ್ ಸ್ಪ್ರೇ ಪರಿಣಾಮಕಾರಿ ಔಷಧವಾಗಿದೆ ಎಂದು ಕೃಷಿ ಅಭಿವೃದ್ಧಿ ಇಲಾಖೆ ನಿರೀಕ್ಷಿಸಿದೆ. 10 ದಿನಗಳ ಅಂತರದಲ್ಲಿ ಎರಡು ಬಾರಿ ಕೃಷಿಭವನ ಮೂಲಕ ಕೃಷಿ ಕ್ರಿಯಾ ಸೇನೆ, ಅಗ್ರೋಸರ್ವೀಸ್ ಸೆಂಟರ್ ಇತ್ಯಾದಿ ಸಂಸ್ಥೆಗಳ ತಾಂತ್ರಿಕ ಸಹಾಯದೊಂದಿಗೆ ಔಷಧ ಸಿಂಡಣೆ ನಡೆಸಲಾಗುವುದು. ಡಿ.31 ಮುಂಚಿತವಾಗಿ ಔಷಧ ಸಿಂಡಣೆ ಪೂರ್ಣಗೊಳಿಸಿ ಪ್ರಧಾನ ಕೃಷಿ ಅಧಿಕಾರಿಗಳು ಕೃಷಿ ಇಲಾಖೆಗೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries