HEALTH TIPS

ಜಿಲ್ಲಾ ಸಾಹಿತ್ಯ ಸಮೇಳನದ ಕವಿಗೋಷ್ಠಿಗೆ ಕವನ, ಕಥೆಗಳ ಆಹ್ವಾನ

ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವು ಜನವರಿ 19 ಹಾಗೂ 20 ರಂದು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹಿರಿಯ ಪ್ರೌಢಶಾಲೆಯಲ್ಲಿ ಜರಗಲಿರುವುದು. ಇದರ ಆಂಗವಾಗಿ ನಡೆಯುವ ಕವಿಗೋಷ್ಠಿಗೆ ಕವಿಗಳನ್ನು ಆಯ್ಕೆ ಮಾಡಲು ಆಸಕ್ತ 18 ವರ್ಷ ಮೇಲ್ಪಟ್ಟ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಕವಿಗಳಿಂದ ಸ್ವರಚಿತ ಕನ್ನಡ ಕವನಗಳನ್ನು ಆಹ್ವಾನಿಸಲಾಗಿದೆ, ಕವನಗಳು ಯಾವುದೇ ವಿಷಯಕ್ಕೆ ಸಂಬಂಧಿಸಿರಬಹುದು. 30 ಸಾಲುಗಳಿಗೆ ಮೀರದಂತೆ; ಒಬ್ಬರು ತಲಾ ಒಂದು ಕವನವನ್ನು ಮಾತ್ರ ಕಳುಹಿಸಬಹುದು. ಡಿ.30ರ ಮೊದಲು ತಮ್ಮ ಕವನಗಳನ್ನು ಖಾಯಂ ವಿಳಾಸ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಪಿ ರಾಮಚಂದ್ರ ಭಟ್ ,ಗೌರವ ಕಾರ್ಯದರ್ಶಿ,ಕ,ಸಾ,ಪ ಕೇರಳ ಗಡಿನಾಡ ಘಟಕ,ಅಂಚೆ ಧರ್ಮತ್ತಡ್ಕ (ವಯ)ಮಂಗಲ್ಪಾಡಿ 671324 ಅಥವಾ ಸುಂದರ ಬಾರಡ್ಕ - 9495755401 ಇವರಿಗೆ ಕಳುಹಿಸಿಕೊಡಬೇಕು. ಈ ಮೊದಲು ಮುದ್ರಣರೂಪದಲ್ಲಿ ಎಲ್ಲೂ ಪ್ರಕಟವಾಗದ ಕವನಗಳಿಗೆ ಆದ್ಯತೆ ನೀಡಲಾಗುವುದು. ಮಕ್ಕಳ ಕವಿಗೋಷ್ಠಿ ಮತ್ತು ಕಥಾಗೋಷ್ಠಿ ಜಿಲ್ಲಾ 12ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಕ್ಕಳ ಕವಿಗೋಷ್ಠಿ ಮತ್ತು ಕಥಾಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ 17 ವರ್ಷಕ್ಕಿಂತ ಕೆಳಗಿನ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಮಕ್ಕಳು ಸ್ವರಚಿತ ಕನ್ನಡ ಕವನ/ಕಥೆಯನ್ನು ಕಳುಹಿಸಿಕೊಡಲು ಕೋರಲಾಗಿದೆ. ಕವನವು24 ಸಾಲುಗಳಿಗೆ ಮೀರದಂತೆ/ ಕಥೆಯು 2ಪುಟಗಳಿಗೆ ಮೀರದಂತೆ ಇರಬೇಕು. ಒಬ್ಬರು ಯಾವುದಾದರೂ ಒಂದು ವಿಭಾಗಕ್ಕೆ ಮಾತ್ರ ಕೃತಿಯನ್ನು ಕಳುಹಿಸಿಕೊಡಬೇಕಿದ್ದು, ಆಯ್ಕೆಯಾದವರಿಗೆ ತಿಳಿಸಲಾಗುವುದು. ಕೃತಿಗಳನ್ನು ಡಿ. 30ರ ಮುಂಚಿತವಾಗಿ ಖಾಯಂ ವಿಳಾಸ ಮತ್ತು ರಕ್ಷಕರ ಮೊಬೃಲ್ ಸಂಖ್ಯೆಯೊಂದಿಗೆ ಪಿ ರಾಮಚಂದ್ರ ಭಟ್ ಗೌರವ ಕಾರ್ಯದರ್ಶಿ,ಕ ಸಾ ಪ ಕೇರಳ ಗಡಿನಾಡ ಘಟಕ,ಅಂಚೆ ಧರ್ಮತ್ತಡ್ಕ (ವಯ)ಮಂಗಲ್ಪಾಡಿ 671324 ಒobiಟ 9446737968, ಇವರಿಗೆ ಕಳುಹಿಸಿಕೊಡಬಹುದು ಎಂದು ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries