ಉಪ್ಪಳ: ಮಂಗಲ್ಪಾಡಿ ಬಂಟರ ಸಂಘದ ವಿಶೇಷ ಸಭೆ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದುರ್ಗಾಪರಮೇಶ್ವರಿ ಕಲಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷ ಉದ್ಯಮಿ ಶ್ರೀಧರ ಶೆಟ್ಟಿ ವಹಿಸಿದ್ದರು. ಸಭೆಯಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಉಪ್ಪಳ ಸಮೀಪದ ಸೋಂಕಾಲಿನಲ್ಲಿ ಬಂಟರ ಭವನ ನಿರ್ಮಿಸುವ ಕುರಿತು ತೀರ್ಮಾನಿಸಲಾಯಿತು.
ವೇದಿಕೆಯಲ್ಲಿ ಹಿರಿಯರಾದ ನಾರಾಯಣ ಶೆಟ್ಟಿ ಬೊಳ್ಳಾರು, ಮೀನಾರು ವಿಶ್ವನಾಥ ಆಳ್ವ, ಮುಳಿಂಜ ಗುತ್ತು ಸಂಜೀವ ಭಂಡಾರಿ, ತಿಮ್ಮಪ್ಪ ಶೆಟ್ಟಿ ಪತ್ವಾಡಿ, ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಾಯಣ ಹೆಗ್ಡೆ ಕೋಡಿಬೈಲು, ಬಂಟರ ಸಂಘದ ಉಪಾಧ್ಯಕ್ಷರಾದ ಹರ್ಷಕುಮಾರ್ ಶೆಟ್ಟಿ ಕೋಡಿಬೈಲು, ಮೊಗೇರುಗುತ್ತು ಸುಧೀೀಶ್ಚಂದ್ರ ಶೆಟ್ಟಿ, ಕೋಶಾಧಿಕಾರಿ ಶಶಿಧರ ಪೂಂಜಾ, ಮಾತೃ ಮಂಡಳಿ ಅಧ್ಯಕ್ಷೆ ಸುಜಾತ ಕೊರಗಪ್ಪ ಶೆಟ್ಟಿ ಸಣ್ಣಹಿತ್ತಿಲು, ಯುವ ಬಂಟರ ಸಂಘದ ಅಧ್ಯಕ್ಷರಾದ ಸಮಾಂತ್ ಶೆಟ್ಟಿ ಹಿತ್ತಿಲು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಂಟರ ಸಮಿತಿ ನಿರ್ಮಾಣದ ಕಟ್ಟಡ ಸಮಿತಿಯನ್ನು ರಚಿಸಲಾಯಿತು. ವಿಶೇಷ ಸಭೆಯಲ್ಲಿ ಮಂಗಲ್ಪಾಡಿ ಬಂಟರ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿ ಪದಾ„ಕಾರಿಗಳು, ಯುವ ಬಂಟರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರ್ಶಿತಾ ಶೆಟ್ಟಿ ಕನ್ಯಾನ ಪ್ರಾರ್ಥನೆ ಹಾಡಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ ಹಿತ್ತಿಲು ಸ್ವಾಗತಿಸಿ, ಕಟ್ಟಡ ಸಮಿತಿ ಕಾರ್ಯದರ್ಶಿ ಒಡ್ಡಂಬೆಟ್ಟು ಗುತ್ತು ಸತೀಶ ಶೆಟ್ಟಿ ವಂದಿಸಿದರು.