ಹೇಡಿ ಕೃತ್ಯ, ರಕ್ತ ಕುದಿಯುತ್ತಿದೆ: ಯೋಧರ ಪ್ರತಿ ರಕ್ತದ ಹನಿಗೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ: ಕೇಂದ್ರ ಸಚಿವ ವಿಕೆ ಸಿಂಗ್
0
ಫೆಬ್ರವರಿ 15, 2019
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ರಕ್ತ ಹರಿದಿರುವುದಕ್ಕೆ ಇಡೀ ದೇಶವೇ ಪ್ರತೀಕಾರದ ಮಾತನ್ನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯೋಧರ ಮೇಲಿನ ಭಯೋತ್ಪಾದಕರ ದಾಳಿಗೆ ತಕ್ಕ ಪ್ರತೀಕಾರ ತೆಗೆದುಕೊಳ್ಳಲೇಬೇಕೆಂಬ ಧ್ವನಿ ಕೇಳಿಬಂದಿದ್ದು ಈ ನಡುವೆ ವಿಕೆ ಸಿಂಗ್ ಸಹ ಪ್ರತೀಕಾರ ತೆಗೆದುಕೊಳ್ಳುವ ಮಾತನ್ನಾಡಿದ್ದಾರೆ.
Vijay Kumar Singh
✔
@Gen_VKSingh
As a soldier and a citizen of India, my blood boils at the spineless and cowardly attacks. 18 brave hearts from the @crpfindia laid down their lives in #Pulwama. I salute their selfless sacrifice & promise that every drop of our soldier’s blood will be avenged. #JaiHind
11.9K
5:39 PM - Feb 14, 2019 · New Delhi, India
Twitter Ads info and privacy
5,343 people are talking about this
ಸಿಆರ್ ಪಿಎಫ್ ಯೋಧರ ಮೇಲಿನ ದಾಳಿಯನ್ನು ಖಂಡಿಸಿ, ಟ್ವೀಟ್ ನಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ವಿ.ಕೆ ಸಿಂಗ್, ನಿವೃತ್ತ ಯೋಧನಾಗಿ, ಭಾರತೀಯ ಪ್ರಜೆಯಾಗಿ ಈ ಹೇಡಿತನದ ದಾಳಿಗೆ ನನ್ನ ರಕ್ತ ಕುದಿಯುತ್ತಿದೆ. ಕೆಚ್ಚೆದೆಯ ಯೋಧರು ಪುಲ್ವಾಮದಲ್ಲಿ ಜೀವತೆತ್ತಿದ್ದಾರೆ. ಅವರ ನಿಸ್ವಾರ್ಥ ಬಲಿದಾನಕ್ಕೆ, ರಕ್ತದ ಪ್ರತಿ ಹನಿಗೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಜೈ ಹಿಂದ್ ಎಂದು ವಿ.ಕೆ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

