HEALTH TIPS

ಪೆರ್ಲ 'ಅಡಿಕೆ ಕೌಶಲ್ಯ ಪಡೆ' ತರಬೇತಿ ಶಿಬಿರ ಅರ್ಜಿ ಸಲ್ಲಿಕೆಗೆ ಮಾರ್ಚ್ 30 ಕೊನೆಯ ದಿನ

ಪೆರ್ಲ:ಪೆರ್ಲ ಸೇವಾ ಸಹಕಾರಿ ಬ್ಯಾಂಕ್, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್, ಕಾಸರಗೋಡು ಅಗ್ರಿಕಲ್ಚರಿಸ್ಟ್ ಕೋ-ಓಪರೇಟಿವ್ ಮಾರ್ಕೆಟಿಂಗ್ ಸೊಸೈಟಿ-ನೀರ್ಚಾಲು, ಪೆರ್ಲ ಶ್ರೀಶಂಕರ ಸೇವಾ ಸಮಿತಿ, ಕ್ಯಾಂಪ್ಕೊ ಇನ್ ಸೇವಾ, ನಾಲಂದ ಮಹಾವಿದ್ಯಾಲಯ, ನಾಲಂದ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಎ.8ರಿಂದ 12ರ ತನಕ ಬೆಳಿಗ್ಗೆ 8.30ರಿಂದ ಸಂಜೆ 5ರ ತನಕ ಪೆರ್ಲ ಶಂಕರಸದನ ಪರಿಸರದಲ್ಲಿ ಒಟ್ಟು 5ದಿನಗಳ 'ಅಡಿಕೆ ಕೌಶಲ್ಯ ಪಡೆ' ತರಬೇತಿ ಶಿಬಿರ ನಡೆಯಲಿದ್ದು ಮಾರ್ಚ್ 30ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಸಾಂಪ್ರದಾಯಿಕ ಶೈಲಿಯಲ್ಲಿ, ನೂತನ ಸುರಕ್ಷಾ ಪರಿಕರಗಳನ್ನು ಬಳಸಿ ನಡೆಯುವ ತರಬೇತಿ ಶಿಬಿರದಲ್ಲಿ ತಳೆ ಕಟ್ಟುವುದು, ಕೊಟ್ಟೆ ಮಣೆ ಉಪಯೋಗ, ಸೆಂಟರ್ ಪ್ಯಾಡ್ ತಯಾರಿ, ಮರ ಹತ್ತುವ ಕ್ರಮಗಳು, ಕೊಕ್ಕೆ ಕಟ್ಟುವುದು, ಹಲ್ಲು ತಯಾರಿ, ಔಷಧಿ ಸಿಂಪಡಣೆ ಮತ್ತು ಕೊಯ್ಲು ಕಲಿಕೆ, ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ತಿತ್ವ ವಿಕಸನ ತರಗತಿ ನಡೆಯಲಿದೆ. ಶಿಬಿರಾರ್ಥಿಗಳಿಗೆ ಶಿಷ್ಯ ವೇತನ, ಮೊದಲ ಕಂತು ಉಚಿತ 5 ಲಕ್ಷದ ಜೀವ ವಿಮೆ, ರಕ್ತದ ಗುಂಪು ವರ್ಗೀಕರಣ, ಸ್ವವಿಳಾಸ ಗುರುತು ಚೀಟಿ, ಪ್ರಮಾಣಪತ್ರ ಸೌಲಭ್ಯತೆ ಇದೆ. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಕೇಂದ್ರ ಕಚೇರಿ, ಸ್ವರ್ಗ, ಮಣಿಯಂಪಾರೆ, ಅಡ್ಯನಡ್ಕ ಶಾಖೆ, ಪೆರ್ಲ ನಾಲಂದ ಕಾಲೇಜು, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಕೇಂದ್ರ ಕಚೇರಿ ನೀರ್ಚಾಲು ಮತ್ತು ಬದಿತಡ್ಕ ಶಾಖೆ, ಕಾಸರಗೋಡು ಅಗ್ರಿಕಲ್ಚರಿಸ್ಟ್ ಕೋ-ಓಪರೇಟಿವ್ ಮಾರ್ಕೆಟಿಂಗ್ ಸೊಸೈಟಿ-ನೀರ್ಚಾಲು ಮತ್ತು ಬದಿಯಡ್ಕ ಶಾಖೆಗಳಲ್ಲಿ ಅರ್ಜಿಗಳು ಲಭ್ಯವಿದ್ದು 18ರಿಂದ 35ವರ್ಷ ಪ್ರಾಯದ ವರೆಗಿನ ಉತ್ಸಾಹಿ ತರುಣರು ಅರ್ಜಿ ಭರ್ತಿ ಗೊಳಿಸಿ, ಭಾವಚಿತ್ರ, ಆಧಾರ್ ಪ್ರತಿ ಲಗತ್ತಿಸಿ ಲಭಿಸಿದ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries