HEALTH TIPS

ಸಂಜೋತಾ ಸ್ಫೋಟ ಪ್ರಕರಣ: ಅಸೀಮಾನಂದ ಸೇರಿ ಎಲ್ಲಾ 4 ಆರೋಪಿಗಳು ಖುಲಾಸೆ

ನವದೆಹಲಿ: ಸಂಜೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಮಾಜಿ ಕಾರ್ಯಕರ್ತ ಸ್ವಾಮಿ ಅಸೀಮಾನಂದ ಸೇರಿ ಎಲ್ಲಾ ನಾಲ್ವರು ಆರೋಪಿಗಳನ್ನು ಪಂಚಕುಲ ಎನ್‍ಐಎ ವಿಶೇಷ ಕೋರ್ಟ್ ಖುಲಾಸೆಗೊಳಿಸಿ ಬುಧವಾರ ಮಹತ್ವದ ತೀರ್ಪು ನೀಡಿದೆ. ಸಂಜೋತಾ ರೈಲು ಸ್ಫೋಟ ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್, ನಾಲ್ವರು ಆರೋಪಿಗಳಾದ ಆಸೀಮಾನಂದ, ಲೋಕೇಶ್ ಶರ್ಮಾ, ಕಮಲ್ ಚೌವ್ಹಾಣ್ ಹಾಗೂ ರಾಜೀಂದ್ರ ಚೌಧರಿಯನ್ನು ಖುಲಾಸೆಗೊಳಿಸಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯ ಒದಗಿಸಲು ಅನುಮತಿ ಕೋರಿ ಪಾಕಿಸ್ತಾನದ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. 12 ವರ್ಷಗಳ ಹಿಂದೆ, 2007 ರ ಫೆ.18 ರಂದು ಹರ್ಯಾಣದ ಪಾನಿಪತ್ ನಲ್ಲಿ ಸಂಜೋತಾ ಎಕ್ಸ್ ಪ್ರೆಸ್ ನಲ್ಲಿ ಬಾಂಬ್ ಸ್ಫೋಟಗೊಂಡು 68 ಜನರು ಸಾವನ್ನಪ್ಪಿದ್ದರು. ಬೇರೆ ಬೋಗಿಗಳಲ್ಲೂ ಎರಡು ಜೀವಂತ ಸೂಟ್?ಕೇಸ್ ಬಾಂಬ್ ಗಳು ಪತ್ತೆಯಾಗಿದ್ದವು. 2016 ರ ಡಿಸೆಂಬರ್ ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಅಸೀಮಾನಂದ ಜಾಮೀನು ಪಡೆದಿದ್ದರು. ಇತರ ಕೆಲವು ಆರೋಪಿಗಳು ಬಂಧನದಲ್ಲೇ ಇದ್ದು, ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries