ಸರಕಾರಿ ಕಚೇರಿಗಳ ಆಗುಹೋಗುಗಳಿಗೆ ಕೈಗನ್ನಡಿ-`ಕಾಸರಗೋಡು ಕನೆಕ್ಟ್' ಆ್ಯಪ್
0
ಮಾರ್ಚ್ 07, 2019
ಕಾಸರಗೋಡು: ಸರಕಾರಿ ಕಚೇರಿಗಳ ಕುರಿತು ಎಲ್ಲ ಮಾಹಿತಿಗಳನ್ನು ಸಾರ್ವಜನಿಕರಿಗೆ ತಲಪಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾದ `ಕಾಸರಗೋಡು ಕನೆಕ್ಟ್' ಆ್ಯಪ್ ಗಮನ ಸೆಳೆಯುತ್ತಿದೆ.
ಸ್ಟಾರ್ಟ್ ಅಪ್ ಮಿಷನ್ ಸಂಸ್ಥೆ ಫೈನೆಕ್ಟ್ಸ್ ಇನ್ನೋವೇಷನ್ ಕೇರಳ ಐಟಿ ಮಿಷನ್ನ ಸಹಕಾರದೊಂದಿಗೆ ಆ್ಯಪ್ ಸಿದ್ಧಪಡಿಸಲಾಗಿದೆ. ಉಳಿಯತ್ತಡ್ಕ ನಿವಾಸಿ ಅಭಿಲಾಷ್ ಸತ್ಯನ್, ಚಟ್ಟಂಚಾಲ್ ನಿವಾಸಿ ಆರ್.ಕೆ.ಷಿದಿನ್, ಚೆರ್ಕಳ ನಿವಾಶಿ ಜಿತ್ತು ಜೋಯಿ ಕಾಸರಗೋಡು ಕನೆಕ್ಟ್ ಆ್ಯಪ್ ಎಂಬ ಸಂಕಲ್ಪವನ್ನು ಸಾಕಾರಗೊಳಿಸಿದವರು.
ಸರಕಾರಿ ಸೇವೆಗಳಿಗೆ, ಇನ್ನಿತರ ಅಗತ್ಯಗಳಿಗೆ ಸಿಬ್ಬಂದಿಯ ಹೆಸರು, ಮೊಬೈಲ್ ನಂಬ್ರ, ಹುದ್ದೆ ಇತ್ಯಾದಿ ಈ ಆ್ಯಪ್ ಮೂಲಕ ಸಾರ್ವಜನಿಕರಿಗೆ ಲ`À್ಯವಾಗಲಿದೆ. ಅಲ್ಲದೆ ಸರಕಾರಿ ಸೇವೆಗಳಲ್ಲಿ ಸಾರ್ವಜನಿಕರು ತೃಪ್ತರೋ, ಅಲ್ಲವೋ ಎಂಬ ವಿಚಾರ ಪೈವ್ಸ್ಟಾರ್ ರೇಟಿಂಗ್ ಸೌಲ`À್ಯ ಮೂಲಕ ದಾಖಲಿಸಬಹುದಾಗಿದೆ. ತೃಪ್ತಿಕರ ಅಲ್ಲದೇ ಇದ್ದಲ್ಲಿ ಜಿಲ್ಲಾ„ಕಾರಿ ಅವರಿಗೆ ದೂರು ದಾಖಲಿಸಬಹುದಾಗಿದೆ. ಇದಕ್ಕಾಗಿ ಆ್ಯಪ್ನಲ್ಲಿ `ದೂರು' ಎಂಬ ಆಪ್ಶನ್ ಒದಗಿಸಲಾಗಿದೆ. ಜೊತೆಗೆ ಸರಕಾರಿ ಸಿಬ್ಬಂದಿ ಡ್ಯೂಟಿ ವೇಳೆಯ ನಡವಳಿಕೆ ಅರಿತುಕೊಳ್ಳಲು, ಸಿಬ್ಬಂದಿ ಕಚೇರಿಗೆ ಹಾಜರಾಗಿದ್ದಾರೋ ಎಂಬ ಬಗ್ಗೆ ತಿಳಿದುಕೊಳ್ಳುವುದಕ್ಕೆ ಜಿಲ್ಲಾ„ಕಾರಿ ಅವರಿಗೆ ಈ ಆ್ಯಪ್ ಮೂಲಕ ಸಾಧ್ಯವಾಗಲಿದೆ. ಸಿಬ್ಬಂದಿ ಕಚೇರಿಗೆ ತಲಪಿ ಯೂಸರ್ ಐ.ಡಿ., ಪಾಸ್ ವರ್ಡ್ ಬಳಸಿ ಆ್ಯಪ್ ತೆರೆಯುವ ಮೂಲಕ ಜಿಲ್ಲಾಧಿಕಾರಿ ಇವರನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ.
ಕಾಸರಗೋಡು ಆ್ಯಪ್ ಕುರಿತು ತರಬೇತಿ : ಜಿಲ್ಲಾಧಿಕಾರಿ ಕಚೇರಿಯ ವಿವಿಧ ಇಲಾಖೆಗಳ ಸಿಬ್ಬಂದಿಗೆ `ಕಾಸರಗೋಡು ಕನೆಕ್ಟ್' ಆ್ಯಪ್ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ಕಚೇರಿಗಳ ಕುರಿತಾದ ಎಲ್ಲ ಮಾಹಿತಿಗಳೂ ಸಾರ್ವಜನಿಕರಿಗೂ ತಿಳಿಯುವಂತೆ, ಜಿಲ್ಲೆಯ ಸರಕಾರಿ ನೌಕರರ ಕರ್ತವ್ಯ, ಅವಧಿಯ ಚಟುವಟಿಕೆಗಳನ್ನು ಗಮನಿಸುವ, ಸಿಬ್ಬಂದಿ ಕಚೇರಿಯಲ್ಲಿ ಈ ಅವಧಿಯಲ್ಲಿ ಹಾಜರಿದ್ದರೋ ಇತ್ಯಾದಿ ವಿಚಾರಗಳಲ್ಲಿ ಕಾಸರಗೋಡು ಕನೆಕ್ಟ್ ಆ್ಯಪ್ ಪೂರಕವಾಗಲಿದೆ. ಆ್ಯಪ್ನ ಸಿ.ಇ.ಒ. ಅಭಿಲಾಷ್ ಸತ್ಯನ್ ತರಗತಿ ನಡೆಸಿದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಾಮಾಜಿಕ ನ್ಯಾಯ ಅಧಿಕಾರಿ ಬಿ.ಭಾಸ್ಕರನ್, ಜಿಲ್ಲಾ ಮಹಿಳಾ ಶಿಶು ಕಲ್ಯಾಣ ಅಧಿಕಾರಿ ಡೀನಾ ಭರತನ್, ಜ್ಯೂನಿಯರ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.




