ಎ.1-3: ಅಲ್ ಬಿಶಾರ ಡಿಸೇನಿಯಂ
0
April 01, 2019
ಮಂಜೇಶ್ವರ: ಆನೆಕಲ್ಲು ಗುವುದಪಡ್ಪು ಅಲ್ ಬಿಶಾರ ಇಸ್ಲಾಮಿಕ್ ಎಜ್ಯುಕೇಷನ್ ಸೆಂಟರ್ನ ಹತ್ತನೇ ವಾರ್ಷಿಕ ಸಂಭ್ರಮ ಎಪ್ರಿಲ್ 1, 2 ಮತ್ತು 3 ರಂದು ಡಿಸೇನಿಯಂ ನಲ್ಲಿ ನಡೆಯಲಿದೆ. ಸಮ್ಮೇಳನದಂಗವಾಗಿ ನಿರ್ಗತಿಕರಾದ 10 ಹೆಣ್ಮಕ್ಕಳ ವಿವಾಹ ಸಂಸ್ಥೆಯ ಖರ್ಚಿನಲ್ಲಿ ನಡೆಯಲಿದೆ. ಎಪ್ರಿಲ್ 1 ರಂದು ಬೆಳಗ್ಗೆ 10 ಗಂಟೆಗೆ ಸಯ್ಯದ್ ಅಬ್ದುರ್ರಹಿಮಾನ್ ಶಮೀರ್ ಅಲ್ ಬುಖಾರಿ ಧ್ವಜಾರೋಹಣ ಗೈಯ್ಯವುದರೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರಕಲಿದೆ. ಬಳಿಕ ಎಸ್.ವೈ.ಎಸ್. ಕಾಸರಗೋಡು ಜಿಲ್ಲಾಧ್ಯಕ್ಷ ಸಯ್ಯದ್ ಪಿ.ಎಸ್.ಆಟ್ಟಕೋಯ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಅತ್ತಾವುಲ್ಲ ತಂಙಳ್ ಉದ್ಯಾವರ ಉದ್ಘಾಟಿಸಲಿದ್ದಾರೆ. ಸಂಜೆ ಏಳು ಗಂಟೆಗೆ ಶೈಖುನಾ ತಜುಶ್ಯರೀಅ ಎಂ.ಅಲಿ ಕುಂಞÂ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಆತ್ಮೀಯ ಸಂಗಮವನ್ನು ಸಯ್ಯದ್ ಇಬ್ರಾಹಿಂ ಪೂಕುಂಞÂ ತಂಙಳ್ ಕಲ್ಲಕಟ್ಟ ಉದ್ಘಾಟಿಸಲಿದ್ದಾರೆ.
ಎಪ್ರಿಲ್ 2 ರಂದು ಉಲಮಾ ಸಂಗಮವನ್ನು ಮಾಣಿಕ್ಕೋತ್ ಅಬ್ದುಲ್ಲ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.ಎಪ್ರಿಲ್ 3 ರಂದು ಬೆಳಿಗ್ಗೆ `ಆಲುಂನಿ' ಮೀಟ್ ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಕೆ.ಎಸ್. ಆಟಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಇಂಡ್ಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಸೇರಿದಂತೆ ಹಲವು ಪ್ರಮುಖ ಪಂಡಿತರು ಭಾಷಣ ಮಾಡಲಿದ್ದಾರೆಂದು ಸಂಬಂಧಪಟ್ಟವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಸ್ತಾದ್ ಮೂಸಲ್ ಮದನಿ, ಸಯ್ಯದ್ ಶಂಶುದ್ದೀನ್ ತಂಙಳ್, ಸುಲೈಮಾನ್ ಕರಿವಳ್ಳೂರು, ಮುಹಮ್ಮದ್ ಸಖಾಫಿ ಪಾತೂರು, ಜಬ್ಬಾರ್ ಸಖಾಫಿ ಪಾತೂರು, ಹಸನ್ ಕುಂಞÂ ಮಳ್ ಹರ್ ಮೊದಲಾದವರು ಉಪಸ್ಥಿತರಿದ್ದರು.