HEALTH TIPS

ಏ.19-20 : ಪ್ರತಿಷ್ಠಾ ವರ್ಧಂತಿ ಮಹೋತ್ಸವ

    ಬದಿಯಡ್ಕ: ಕಲ್ಲುಗದ್ದೆ ಶ್ರೀ ದುರ್ಗಾಂಬಿಕಾ ಮಹಾಮಾತೆಯ ಕ್ಷೇತ್ರದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಕೃಪಾಶೀರ್ವಾದದೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ಬಳ್ಳಪದವು ಮಾಧವ ಉಪಾಧ್ಯಾಯರ ನೇತೃತ್ವದಲ್ಲಿ ಏ.19 ಮತ್ತು 20 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
    ಏ.19 ರಂದು ಶ್ರೀ ನಾಗಬ್ರಹ್ಮ ವನದಲ್ಲಿ ಬೆಳಗ್ಗೆ 7 ಕ್ಕೆ ಗಣಪತಿ ಹವನ, ಪ್ರಾರ್ಥನೆ, 8 ಕ್ಕೆ ಕಲಶಪೂಜೆ, ಕಲಶಾಭಿಷೇಕ, 8.30 ರಿಂದ ಶ್ರೀ ನಾಗದೇವರಿಗೆ ತಂಬಿಲ ಸೇವೆ, 9 ರಿಂದ ರಕ್ತೇಶ್ವರಿ, ಗುಳಿಗ, ಬ್ರಹ್ಮರಕ್ಷಸು, ರಾಜಗುಳಿಗ, ದೈವಗಳಿಗೆ ತಂಬಿಲ ಸೇವೆ, ಮಂಗಳಾರತಿ, 10 ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಮಧ್ಯಾಹ್ನ 11 ಕ್ಕೆ ಕೊರಗ ಗುಳಿಗ ಹಾಗು ರಾಜಗುಳಿಗ ದೈವಗಳ ಕೋಲ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
  ಏ.20 ರಂದು ಬೆಳಿಗ್ಗೆ 7 ರಿಂದ ಗಣಪತಿ ಹವನ, ಪ್ರಾರ್ಥನೆ, 8 ಕ್ಕೆ ಉಷ:ಪೂಜೆ, 9 ರಿಂದ ಕಲಶಪ್ರತಿಷ್ಠೆ, ಕಲಶಪೂಜೆ, ಕಲಶಾಭಿಷೇಕ, 11 ಕ್ಕೆ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, 1 ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, 2 ರಿಂದ ಅನ್ನಪ್ರಸಾದ ವಿತರಣೆ, ಸಂಜೆ 6 ರಿಂದ ದೀಪಾರಾಧನೆ, 6.30 ರಿಂದ ಭಕ್ತಿ ನಾಮಾರ್ಚನೆ, ರಾತ್ರಿ 8.30 ಕ್ಕೆ ಸರ್ವಾಲಂಕಾರ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, 9 ಕ್ಕೆ ಅನ್ನದಾನ ನಡೆಯಲಿದೆ.
 ಏ.23 ರಂದು ಸಂಜೆ 6.30 ರಿಂದ ಶ್ರೀ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಪೂಜಾ ವಿಧಿಗಳು, ರಾತ್ರಿ 8 ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries