ಕನಿಲದಲ್ಲಿ ಭರಣಿ ಮಹೋತ್ಸವ ಇಂದಿನಿಂದ
0
April 01, 2019
ಮಂಜೇಶ್ವರ: ಕನಿಲ ಶ್ರೀಭಗವತೀ ಕ್ಷೇತ್ರದ ವಾರ್ಷಿಕ ಭರನಿ ಮಹೋತ್ಸವ ಇಂದಿನಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಅಪರಾಹ್ನ 3ಕ್ಕೆ ಶ್ರೀಕ್ಷೇತ್ರದ ಭಂಡಾರ ನಿಲಯದಿಂದ ಭಂಡಾರ ಹೊರಡುವುದು, ಸಂಜೆ 5ಕ್ಕೆ ಭಂಡಾರ ನಿಲಯದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡುವುದು, ರಾತ್ರಿ 7 ರಿಂದ ಭಜನೆ ನಡೆಯಲಿದೆ.
ಮಂಗಳವಾರ(ಏ.2 ರಂದು) ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7.30ರಿಂದ ಸ್ಥಳೀಯ ಮಕ್ಕಿಳಿಂದ ನೃತ್ಯ ವೈವಿಧ್ಯ, ಬಳಿಕ ಮಂಗಳೂರಿನ ಚಾಪರ್ಕ ಕಲಾವಿದರಿಂದ ಪುಷ್ಪಕ್ಕನ ಇಮಾನ ತುಳು ನಾಟಕ ಪ್ರದರ್ಶನ ನಡೆಯಲಿದೆ. ರಾತ್ರಿ 12 ರಿಂದ ನಡಾವಳಿ ಉತ್ಸವ, ಬಿಂಬ ಪ್ರದರ್ಶನ ನಡೆಯಲಿದೆ. ಏ.8 ರಂದು ಉತ್ಸವ ಸಮಾರೋಪಗೊಳ್ಳಲಿದೆ.