ಕಾಸರಗೋಡು: ಅಪರಾಧಿಗಳ ಪುನರ್ವಸತಿಗಾಗಿ ಸಾಮಾಜಿಕ ನ್ಯಾಯ ಇಲಾಖೆಯು ಜಿಲ್ಲಾ ಪೆÇ್ರಬೇಷನ್ ಕಚೇರಿಗಳ ಮೂಲಕ ಜಾರಿಗೊಳಿಸುವ `ನೇರ್ ವಳಿ(ಸರಿಯಾದ ದಿಶೆ)' ಯೋಜನೆಯ ಮೂರನೇ ಹಂತದ ಚಟುವಟಿಕೆಗಳು ಜಿಲ್ಲೆಯಲ್ಲಿ ಆರಂಭಗೊಂಡಿವೆ.
ಯೋಜನೆಯ ಮೂರನೇ ಹಂತದಲ್ಲಿ ಹಿಂದೆ ಅಪರಾಧ ಕೃತ್ಯ ಎಸಗಿದವರು/ಉತ್ತಮ ನಡತೆ ಶಿಕ್ಷೆಗೆ ಈಡಾದವರು/ಮಕ್ಕಳ ಸಂಸ್ಥೆಗಳಿಂದ ಅಮಾನತುಗೊಂಡವರು ಮೊದಲಾದವರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಅಂಗವಾಗಿ ಉದ್ಯೋಗ ತರಬೇತಿ(ಯಾವುದೇ ವಲಯದಲ್ಲಿ ಸ್ಕಿಲ್ ಜೋಬ್ ಟ್ರೈನಿಂಗ್) ನೀಡುವ ಯೋಜನೆಯಿದೆ. ಕೇಸುಗಳಲ್ಲಿ ಶಾಮೀಲಾದವರ ಮಕ್ಕಳಿಗೆ ಶಿಕ್ಷಣ ಸಹಾಯ ಒದಗಿಸುವ ಯೋಜನೆಗೆ ಸರಕಾರ ಮಂಜೂರಾತಿ ನೀಡಿದೆ. ಯೋಜನೆಯ ಮೂರನೇ ಹಂತದ ಅಂಗವಾಗಿ 18-25 ವಯೋಮಾನದವರಾದ ಯುವ ಅಪರಾ„ಗಳ ಜೊತೆ ಸಮಗ್ರವಾಗಿ ಬೆರೆತು ಸಾಮಾಜಿಕ-ಮಾನಸಿಕ ಸಹಾಯ ಒದಗಿಸಿ ಮುಂದೆ ಇಂಥಾ ಪ್ರಕರಣಗಳಲ್ಲಿ ಶಾಮೀಲಾಗದಂತೆ ಬದಲಾವಣೆ ತಂದು ಉತ್ತಮ ಬದುಕು ಸವೆಸುವಂತೆ ಪೆÇ್ರೀತ್ಸಾಹಿಸುವುದು ಯೋಜನೆಯ ಉದ್ದೇಶ. ಇದರ ಸುಲಲಿತ ಜಾರಿಗೆ ಸಾಮಾಜಿಕ ರಂಗದಲ್ಲಿ ಆಸಕ್ತರಾದ/ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲಾದವರಿಂದ ಜಿಲ್ಲೆಯಲ್ಲಿ 5 ಮಂದಿ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು.