HEALTH TIPS

ರಾಷ್ಟ್ರೀಯ ಹೆದ್ದಾರಿ ದುರಸ್ತಿ ಅಗತ್ಯ: ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ

     
             ಕಾಸರಗೋಡು:  ಬಿರುಸಿನ ಮಳೆಯ ಪರಿಣಾಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಕೆಲ ಭಾಗಗಳು ಹಾನಿಗೊಂಡಿದ್ದು, ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆಗ್ರಹ ವ್ಯಕ್ತಪಡಿಸಿದೆ.
       ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ Sಟಿivಂಡಿ ನಡೆದ ಸಭೆಯಲ್ಲಿಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು.
         ಜಿಲ್ಲೆಯಲ್ಲಿ 96 ಕಿಮೀರಾಷ್ಟ್ರೀಯ ಹೆದ್ದಾರಿಯಿದ್ದು,ಬಹುತೇಕ ಕಡೆ ಹಾನಿಯುಂಟಾಗಿದೆ. ದುರಸ್ತಿಗಾಗಿ ನಿಧಿ ಮಂಜೂರು ಮಾಡಿಲ್ಲ. ಚತುಷ್ಪದ ರಸ್ತೆಯ ಕಾಮಗಾರಿ ನಡೆಯಬೇಕಿದ್ದು, ಈ ಬಾರಿ ಸುರಿದ ಬಿರುಸಿನಮಳೆಗೆ ಅನೇಕಕಡೆ ಕುಳಿಗಳುನಿರ್ಮಾಣವಾಗಿವೆ. ಈ ಹಿನ್ನೆಲೆಯಲ್ಲಿತಲಪ್ಪಾಡಿಯಿಂದ ಕಾಲಿಕಡವು ವರೆಗಿನ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ದುರಸ್ತಿಯ ಅಗತ್ಯವಿದೆ ಎಂದು ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲ್ ಮತ್ತು ಕೆ.ಕುಂ ಞÂ್ಞ ರಾಮನ್ ಜಂಟಿಯಾಗಿ ಆಗ್ರಹಿಸಿದರು.
       ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿಜಿಲ್ಲೆಗೆ ಪ್ರತ್ಯೇಕನಿಧಿ ಮಂಜೂರು ಮಾಡುವಂತೆ ನೀಲೇಶ್ವರ ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್ ಸಭೆಯಲ್ಲಿ ಬೇಡಿಕೆ ಮಂಡಿಸಿದರು. ನೀಲೇಶ್ವರ ರಾಜಾ ರಸ್ತೆಯಲ್ಲಿ ಅಕ್ರಮ ಪಾಕಿರ್ಂಗ್ ತಡೆಯಲು ಕ್ರಮ ಕೈಗೊಳ್ಳುವಂತೆ ಮೋಟಾರು ವಾಹನ ಇಲಾಖೆಗೆ ಆದೇಶಿಸಲಾಗಿದೆ.
    ಕಾ ಞÂ್ಞ ಂಗಾಡ್ ನಗರದ ಕೆ.ಎಸ್.ಟಿ.ಪಿ.ಸರ್ತೆಯಲ್ಲಿ ಕಲ್ವರ್ಟ್ ಅವೈ ಜ್ಞಾ ನಿಕವಾಗಿ ನಿರ್ಮಿಸಲಾದ ಹಿನ್ನೆಲೆಯಲ್ಲಿ ನೀರು ಹರಿದು ಹೋಗದೆ ಸಮಸ್ಯೆಯಾಗಿದೆ. ಅಲಾಮಿಪಳ್ಳಿಬಸ್ನಿಲ್ದಾಣ ದಲ್ಲಿ ಎಲ್ಲ ಬಸ್ ಗಳೂ ತೆರಳುವಂತೆ ಮತ್ತು ಬಸ್ ನಿಲ್ದಾಣದಲ್ಲಿ ಫಯರ್ ಸ್ಟೇಜ್ ಬದಲಿಸುವಂತೆ  ಕ್ರಮಕೈಗೊಳ್ಳಬೇಕು ಎಂದು ಕಾ?ಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ತಿಳಿಸಿದರು.
     ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್, ಸಂಸದರಪ್ರತಿನಿಧಿ ಎ.ಗೋವಿಂದನ್ ನಾಯರ್, ಗ್ರಾಮಪಂಚಾಯತ್ ಅಧ್ಯಕ್ಷರ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಜಲೀಲ್,ಜಿಲ್ಲಾ ಯೋಜನಾಧಿಕಾರಿ ಎಸ್.ಸತ್ಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries