HEALTH TIPS

ಕಿದೂರು : ವರಮಹಾಲಕ್ಷ್ಮಿ ವ್ರತಾಚರಣೆ


     ಕುಂಬಳೆ: ಕಳತ್ತೂರು ಕಿದೂರು ಶ್ರೀ ಮಾತಾ ಮಹಿಳಾ ಸಂಘದ ವತಿಯಿಂದ ಹದಿನಾರನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ  ಆ.9ರಂದು ಕಿದೂರು ಮಹಾದೇವ ದೇವಸ್ಥಾನದಲ್ಲಿ  ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ  ಪ್ರಾರ್ಥನೆ, ಸಂಕಲ್ಪದೊಂದಿಗೆ ಪೂಜೆ ಆರಂಭವಾಗಲಿದೆ.
     ಬ್ರಹ್ಮಶ್ರೀ ನಿಡುಗಳ ಶಂಕರನಾರಾಯಣ ಭಟ್ ಅವರ ನೇತೃತ್ವದಲ್ಲಿ ನಡೆಸಲಾಗುವ ಪೂಜಾ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಕುಂಕುಮಾರ್ಚನೆ ಬೆಳಗ್ಗೆ 10.45ಕ್ಕೆ ಆರಂಭವಾಗಲಿದೆ.
    ಬಳಿಕ 11.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ  ದೇವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ರೈ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಭಾಗವಹಿಸುವ ಸವಿತಾ ಬಾಳಿಕೆ ಪೆರ್ಲ ಪಡ್ರೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿಯ ನಂತರ  ಪ್ರಸಾದ ಭೋಜನದ ವ್ಯವಸ್ಥೆ  ಮಾಡಲಾಗಿದೆ.
         ಭಕ್ತಾದಿಗಳು ಈ ಧಾರ್ಮಿಕ ಸಮಾರಂಭದಲ್ಲಿ  ಪಾಲ್ಗೊಳ್ಳಬೇಕಾಗಿ ಶ್ರೀ ಮಾತಾ ಮಹಿಳಾ ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ  ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries