ಕಾಸರಗೋಡು: ಕೇರಳ ಪ್ರಿಂಟರ್ಸ್ ಅಸೋಸಿಯೇಶನ್ ಕಾಸರಗೋಡು ವಲಯ ಸಮ್ಮೇಳನವು ಕಾಸರಗೋಡು ಮುನಿಸಿಪಲ್ ವನಿತಾ ಹಾಲ್ನಲ್ಲಿ ಭಾನುವಾರ ಜರಗಿತು. ಪುರೋಹಿತ್ ಕೆ.ರಾಮಕೃಷ್ಣ ಆಚಾರ್ಯ ಅವರು ಧ್ವಜಾರೋಹಣಗೈಯ್ಯುವುದರೊಂದಿಗೆ ಚಾಲನೆಗೊಂಡಿತು.
ಕೆ.ಪಿ.ಎ. ಕಾಸರಗೋಡು ವಲಯ ಅಧ್ಯಕ್ಷ ರೆಜಿ ಮ್ಯಾಥ್ಯೂ ಅವರು ಅಧ್ಯಕ್ಷತೆ ವಹಿಸಿದರು. ಸಮ್ಮೇಳನದ ಉದ್ಘಾಟನೆಯನ್ನು ಕೆ.ಪಿ.ಎ. ಜಿಲ್ಲಾಧ್ಯಕ್ಷ ಎನ್.ಕೇಳು ನಂಬ್ಯಾರ್ ನೆರವೇರಿಸಿದರು. ಒಗ್ಗಟ್ಟಾದ ಪರಿಶ್ರಮ ಹಾಗೂ ಆಧುನಿಕ ತಾಂತ್ರಿಕ ವಿದ್ಯೆಗಳಿಂದ ಮಾತ್ರವೇ ಅಧ:ಪಥನದತ್ತ ಸಾಗುತ್ತಿರುವ ಕಿರು ಮುದ್ರಣ ರಂಗವನ್ನು ಸಂರಕ್ಷಿಸಲು ಸಾಧ್ಯವೆಂದು ಮುಖ್ಯಅತಿಥಿಯಾಗಿ ಆಗಮಿಸಿದ ಆಲ್ ಇಂಡಿಯಾ ಪ್ರಿಂಟರ್ಸ್ನ ಜಿ.ಬಿ. ಸದಸ್ಯ ಸಿಬಿ ಕೊಡಿಯಾಂಕುನ್ನೇಲ್ ಆಭಿಪ್ರಾಯಪಟ್ಟರು.
ರಾಜ್ಯ ಕಾರ್ಯದರ್ಶಿ ಹಾಗೂ ಕಾಸರಗೋಡು ಜಿಲ್ಲಾ ನಿರೀಕ್ಷಕ ವಿನಯ ರಾಜ್, ರಾಜ್ಯ ಕಾರ್ಯದರ್ಶಿ ಎಂ.ಜಯರಾಮ್ ಅತಿಥಿಗಳಾಗಿ ಮಾತನಾಡಿದರು. ಮುಜೀಬ್ ಅಹಮ್ಮದ್, ಮುಹಮ್ಮದ್ ಸಾಲಿ, ರಾಜಾರಾಂ ಪೆರ್ಲ, ಅಜಯ್ ಕುಮಾರ್ ವಿ.ಬಿ., ಅಶೋಕ್ ಕುಮಾರ್ ಮುಂತಾದವರು ಶುಭಾಶಂಸನೆಗೈದರು.
ಸಂಘಟನಾ ವರದಿಯನ್ನು ವಲಯ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಬಲ್ಲಾಳ್ ಮಂಡಿಸಿದರು. ವಲಯ ಕೋಶಾಧಿಕಾರಿ ಬಷೀರ್ ಲೆಕ್ಕಪತ್ರವನ್ನು ಮಂಡಿಸಿದರು. ರಾಮಚಂದ್ರ ಬಲ್ಲಾಳ್ ಸ್ವಾಗತಿಸಿ, ಅಬ್ದಲ್ಲ ಲತೀಫಿಯ ವಂದಿಸಿದರು.
2019-21 ಸಾಲಿನ ನೂತನ ಪದಾಧಿಕಾರಿಗಳಾಗಿ ರವಿಶಂಕರ್ ಎ. ಅಧ್ಯಕ್ಷ, ರಾಮಚಂದ್ರ ಬಲ್ಲಾಳ್ ಉಪಾಧ್ಯಕ್ಷ, ಪ್ರಜಿತ್ ಮೇಲತ್ ಕಾರ್ಯದರ್ಶಿ, ಸುಧೀಶ್ ಜೊತೆಕಾರ್ಯದರ್ಶಿ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ಲ ಲತೀಫಿಯಾ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆರಿಸಲಾಯಿತು.