ತಿರುವಂತಪುರ: ಮಹಾಮಳೆಯಿಂದ ಕೆಂಗೆಟ್ಟು ಪರಿತಪಿಸುತ್ತಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರದಿಂದ ನಿರ್ವಹಣಾ ಚಟುವಟಿಕೆಗಳು ವೇಗತೆಯೊಂದಿಗೆ ಮುಂದುವರಿದಿದ್ದು, ಭೂಕುಸಿತ ಉಂಟಾಗಿರುವಲ್ಲಿ ಮೃತದೇಹಗಳನ್ನು ಇನ್ನಷ್ಟು ಹೊರತೆಗೆಯಲಾಗುತ್ತಿದೆ.83 ಮೃತದೇಹಗಳನ್ನು ಈಗಾಗಲೇ ಹೊರತೆಗೆಯಲಾಗಿದೆ.
ಈ ಮಧ್ಯೆ ಸುರಕ್ಷಿತತೆಯ ದೃಷ್ಟಿಯಿಂದ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ನಾಳೆ(ಮಂಗಳವಾರ) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಪತ್ತನಂತಿಟ್ಟು, ಆಲಪ್ಪುಳ, ಕೋಟ್ಟಯಂ, ಎರ್ನಾಕುಳಂ, ತೃಶೂರ್, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಮಲಪ್ಪುರಂ ಜಿಲ್ಲೆಗಳಾದ್ಯಂತ ಮಂಗಳವಾರ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.


