HEALTH TIPS

ಬೋವಿಕ್ಕಾನದಲ್ಲಿ ರಕ್ತದಾನ ಶಿಬಿರ

    ಮುಳ್ಳೇರಿಯ:  ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯ ರಾಷ್ಟಿçÃಯ ಸೇವಾ ಯೋಜನೆಯ ನೇತೃತ್ವದಲ್ಲಿ ಬ್ಲಡ್ ಸಹಾಯ ಗುಂಪು ರುದಿರ ಸೇನೆಯ ಸಹಕಾರದೊಂದಿಗೆ ಬೋವಿಕ್ಕಾನ ಶಾಲಾ ಸಭಾಂಗಣದಲ್ಲಿ ರಕ್ತದಾನ ಶಿಬಿರವು ನಡೆಯಿತು. ಏನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಮಂಗಳೂರಿನ ವೈದ್ಯೆ ಡಾ.ವಿದ್ಯಾ ಕಾಮತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ರಕ್ತದಾನದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.
      ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸುಹರಾ ಬೋವಿಕ್ಕಾನ, ಅಬ್ದುಲ್ ಖಾದರ್, ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷನ್ ನಂಬಿಯಾರ್, ಅಧ್ಯಾಪಕರಾದ ಜಯರಾಮನ್ ಪಿ, ಕರೀಮ್ ಕೋಯಕ್ಕಿಲ್, ಮಣಿಕಂಠನ್ ಎಂ, ರಕ್ತ ಸಹಾಯ ಸಂಘಗಳಾದ ರುದಿರ ಸೇನೆಯ ಸುಽÃಶ್ ಪಿ., ಹಾಗೂ ಬ್ಲಡ್ ಹೆಲ್ತ್ ಕೇರ್ ಕರ್ನಾಟಕದ ನಾಸಿರ್ ಹುಸೈನ್  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಪ್ರೀತಮ್ ಎ.ಕೆ. ಸ್ವಾಗತಿಸಿ, ಲೀಡರ್ ಯದುಕೃಷ್ಣನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries