ಕಾಸರಗೋಡು: ಹಿರಿಯ ಪತ್ರಕರ್ತ, ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ದೀರ್ಘ ಕಾಲ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಕೆ.ಎಂ. ಅಹಮ್ಮದ್ ಮಾಸ್ಟರ್ ಸಂಸ್ಮರಣೆ ಮತ್ತು ಕೆ.ಎಂ ಅಹಮ್ಮದ್ ಸ್ಮಾರಕ ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭ ಶುಕ್ರವಾರ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಿತು.
ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ಬಾಬು ಸಮಾರಂಭ ಉದ್ಘಾಟಿಸಿದರು. ಪ್ರೆಸ್ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೃಷಿಪರ ವರದಿಗಾರಿಕೆಗಾಗಿ ಪತ್ರಕರ್ತ ರೆಜಿ ಜೋಸೆಫ್ ಅವರಿಗೆ ಕೆ.ಎಂ ಅಹಮ್ಮದ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಡಿ.ಸಜಿತ್ ಬಾಬು ಅವರು ನಗದು ಹಾಗೂ ಸ್ಮರಣಿಕೆ ನೀಡಿ ರೆಜಿ ಜೋಸೆಫ್ ಅವರನ್ನು ಗೌರವಿಸಿದರು.
ಜಿಲ್ಲಾ ಗ್ರಂಥಾಲಯ ಕೌನ್ಸಿಲ್ ಅಧ್ಯಕ್ಷ ಪಿ.ವಿ.ಕೆ ಪನಯಾಲ್ ಸಂಸ್ಮರಣಾ ಭಾಷಣ ಮಾಡಿದರು. ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಉಪಾಧ್ಯಕ್ಷ ಪಿ.ವಿ ಕುಟ್ಟನ್, ಜಿಲ್ಲಾ ಸಮಿತಿ ಜತೆಕಾರ್ಯದರ್ಶಿ ಪ್ರದೀಪ್ ಜಿ.ಎನ್, ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿ ಮಧುಸೂದನ್, ಪ್ರೆಸ್ಕ್ಲಬ್ ಮಾಜಿ ಅಧ್ಯಕ್ಷರಾದ ಸನ್ನಿ ಜೋಸೆಫ್, ಟಿ.ಎ ಶಾಫಿ, ಮುಜೀಬ್ ಅಹಮ್ಮದ್ ಉಪಸ್ಥಿತರಿದ್ದರು. ಪ್ರೆಸ್ಕ್ಲಬ್ ಕಾರ್ಯದರ್ಶಿ ಕೆ.ವಿ ಪದ್ಮೇಶ್ ಸ್ವಾಗತಿಸಿ, ವಂದಿಸಿದರು.


