ಕಾಸರಗೋಡು: ಕೇತುಗ್ರಸ್ತ ಖಗ್ರಾಸ ಸೂರ್ಯಗ್ರಹಣ ನಿಮಿತ್ತ ಅರಿಷ್ಟ ರಾಶಿ ಮತ್ತು ನಕ್ಷತ್ರದ ಭಕ್ತ ಜನರ ಶ್ರೇಯಸ್ಸಿಗೋಸ್ಕರ ಮತ್ತು ಲೋಕ ಕಲ್ಯಾಣಾರ್ಥ ಕೂಡ್ಲಿನ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕುಂಬಳೆ ವಾಸುದೇವ ಅಡಿಗರ ನೇತೃತ್ವದಲ್ಲಿ ಸಾಮೂಹಿಕ ಗ್ರಹಣಶಾಂತಿ ಹವನ ನಡೆಯಿತು.
ಹವನದಲ್ಲಿ ಪಾಲ್ಗೊಂಡ ನೂರಾರು ಭಕ್ತರಿಂದ ವೈಯಕ್ತಿಕ ಸಂಕಲ್ಪಮಾಡಿಸಿ ಆರಂಭಗೊಂಡ ಹವನ 11.05 ಗಂಟೆಗೆ ಪೂರ್ಣಾಹುತಿಗೊಂಡಿತು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ನ ಅನುವಂಶಿಕ ಮೊಕ್ತೇಸರರಾದ ಸದಾಶಿವ, ಆಡಳಿತ ಮೊಕ್ತೇಸರರಾದ ವೇಣುಗೋಪಾಲ ಮಾಸ್ತರ್, ಕಾರ್ಯದರ್ಶಿ ಸುರೇಶ್ ಮಣಿಯಾಣಿ, ಕೋಶಾ„ಕಾರಿ ಪ್ರಕಾಶ್ ಶೆಟ್ಟಿ, ಸದಸ್ಯರಾದ ವಸಂತ ನಾಂಗುರಿ, ಶಶೀಂದ್ರನ್, ಯುವಕ ಸಂಘ, ಮಹಿಳಾ ಸಂಘದ ಪದಾ„ಕಾರಿಗಳು ನೇತೃತ್ವ ವಹಿಸಿದರು. ಸಮಿತಿ ಸದಸ್ಯರಾದ ಕಿರಣ್ ಪ್ರಸಾದ್ ಕೂಡ್ಲು, ರವಿ ಮಣಿಯಾಣಿ, ಅಮೃತ್ ಮುಂತಾದವರು ಸಹಕರಿಸಿದರು.


