ಮಂಜೇಶ್ವರ: ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದವರಿಂದ ಕೋಟ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ ಇತ್ತೀಚೆಗೆ ಸೇವಾರೂಪವಾಗಿ ನಡೆಸಿದ ಗುರುದಕ್ಷಿಣೆ ತಾಳಮದ್ದಳೆ ಜನಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಗೌರೀಶ ಕಾರಂತ ಶಿರಿಯ, ಚೆಂಡೆ ಮದ್ದಳೆಗಳಲ್ಲಿ ವಿಕಾಸ್ ರಾವ್, ಸ್ಕಂದ ಕೊನ್ನಾರ್ ಹಾಗೂ ಮುಮ್ಮೇಳದಲ್ಲಿ ವೇದಮೂರ್ತಿ ಗಣೇಶ ನಾವಡ ಮೀಯಪದವು, ರಾಜಾರಾಮ ರಾವ್ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ಗುರುರಾಜ ಹೊಳ್ಳ ಬಾಯಾರು, ಗುರುಪ್ರಸಾದ ಹೊಳ್ಳ ತಿಂಬರ, ವಿಘ್ನೇಶ ಕಾರಂತ ಶಿರಿಯ, ಅವಿನಾಶ ಹೊಳ್ಳ ವರ್ಕಾಡಿ ಭಾಗವಹಿಸಿದ್ದರು.


